Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಮನದನ್ನೆಯ ಸಹಕಾರ, ಪ್ರೀತಿ ವಿಶ್ವಾಸ ಹಿತವೆನಿಸಲಿದೆ.

07:45 AM Mar 26, 2021 | Team Udayavani |

26-03-2021

Advertisement

ಮೇಷ: ನಿಮಗೀಗ ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಭದ್ರತೆಯ ಅವಶ್ಯಕತೆಯು ತೋರಿಬರಲಿದೆ. ಕೆಲವೊಂದು ಕೆ‌ಲಸ ಕಾರ್ಯಗಳಲ್ಲಿ ವೈಫ‌ಲ್ಯವು ಕಂಡು ಬರುವುದು. ನಿರಾಶಾ ಮನೋಭಾವ ಕಾಡಲಿದೆ. ದೇಹಾಯಾಸವಾದೀತು.

ವೃಷಭ: ನಿಮ್ಮ ವೃತ್ತಿಯಲ್ಲಿ ಸ್ವಲ್ಪ ಏರುಪೇರು ಕಂಡುಬಂದೀತು. ದೇಹಾಯಾಸದಿಂದ ಅನಾರೋಗ್ಯ, ನಿಶ್ಶಕ್ತಿ ಕಾಡಲಿದೆ. ದೂರ ಸಂಚಾರದಿಂದ ಅನಾವಶ್ಯಕ ಧನವ್ಯಯ ಕಂಡುಬಂದೀತು. ವಿಶೇಷ ಬದಲಾವಣೆ ಇರುವುದಿಲ್ಲ.

ಮಿಥುನ: ವಾಕ್‌ ದೋಷದಿಂದ ಧನಹಾನಿ ಸಂಭವಿಸಲಿದೆ. ಆದರೂ ಹಲವು ವಿಧದಿಂದ ಧನಲಾಭ ಕಂಡು ಬರಲಿದೆ. ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ಧನ ಲಾಭ ಬಂದರೂ ಜಾಗ್ರತೆ ಮಾಡುವುದು ಅವಶ್ಯವಿದೆ.

ಕರ್ಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಧನ ಹಾನಿ, ದುಷ್ಟ ವೃತ್ತಿಯಿಂದ ಮಾನಹಾನಿ ಇತ್ಯಾದಿಗಳು ತೋರಿ ಬಂದರೂ ಕುಟುಂಬ ಜನರ ಒಡನಾಟ, ಬಂಧು ಸುಖಗಳಿಂದ ಸಮಾಧಾನ ಸಿಗಲಿದೆ. ದೇವತಾಕಾರ್ಯವಿದೆ.

Advertisement

ಸಿಂಹ: ಕೃಷಿ, ಕಾರ್ಖಾನೆ, ಯಂತ್ರೋದ್ಯಮಗಳ ವ್ಯವಹಾರದಲ್ಲಿ ತೀವ್ರ ತಾಪತ್ರಯ ಕಂಡು ಬರುವುದು. ದುಷ್ಟಗ್ರಹಗಳ ಚಲನೆಯಿಂದ ವಿವಿಧ ಕಷ್ಟನಷ್ಟಗಳಿಂದ ವಿಪದಾಪತ್ತುಗಳು, ಭಯವು ನಿಮ್ಮನ್ನು ಕಾಡಲಿದೆ.

ಕನ್ಯಾ: ಅಪಘಾತ ಭಯ, ರಕ್ತದೋಷ, ಅಪಮಾನ, ಸ್ಥಾನಭ್ರಷ್ಟ, ವಿಷಾಗ್ನಿ ಭಯ ಅನುಭವಕ್ಕೆ ಬಂದರೂ ಸದ್ಯ ಗುರುವಿನ ಅನುಗ್ರಹ ನಿಮ್ಮ ಮೇಲಿದೆ. ಆರೋಗ್ಯ ಉತ್ತಮ. ಮನೆಯಲ್ಲಿ ಪತ್ನಿಯಿಂದ ಸಮಾಧಾನ ಸಂತಸವಿದೆ.

ತುಲಾ: ಆಗಾಗ ತುಸು ಅನಾರೋಗ್ಯ ಕಾಣಿಸಿಕೊಂಡು ದೇಹಕ್ಕೂ ಮನಸ್ಸಿಗೂ ನೆಮ್ಮದಿ ತೀರಾ ಕಡಿಮೆಯಾದೀತು. ಆದರೂ ಸಕಲ ಕಾರ್ಯ, ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲಕರವಾದ ವಾತಾವರಣ ಮೂಡಿಬಂದು ಸಂತಸ.

ವೃಶ್ಚಿಕ: ಖರ್ಚು ವೆಚ್ಚಗಳಲ್ಲಿ ಮಿತಿ ಇರಲಿ. ಅತೀ ವಿಶ್ವಾಸವು ಭಂಗ ತರಲಿದೆ. ಸಾಂಸಾರಿಕವಾಗಿ ನೆಮ್ಮದಿ ಇದೆ. ಸಾಮಾಜಿಕವಾಗಿ ಮನ್ನಣೆ, ಗೌರವ ಕಂಡು ಬರಲಿದೆ. ರಾಜಕೀಯದವರಿಗೆ ಕಷ್ಟ, ನಷ್ಟ, ವ್ಯಾಕುಲತೆ ಕಂಡುಬಂದೀತು.

ಧನು: ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯವು ಭಯ ದುಃಖಾದಿ ವಾದ, ವಿವಾದ, ತಕರಾರುಗಳನ್ನು ತರಲಿದೆ. ಕುಟುಂಬದ ಹಿರಿಯರ ಅನಾರೋಗ್ಯದಿಂದ ಉದ್ವೇಗ, ಅತಿಯಾದ ಧನವ್ಯಯ ಕಂಡು ಬರುವುದು.

ಮಕರ: ಆತ್ಮೀಯರೊಡನೆ ವಿರಸ ಮೂಡಿ ಬಂದೀತು. ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯದ ಕೆಲಸಕಾರ್ಯಗಳು ಕೈಗೂಡಲಿವೆ. ಆಕಸ್ಮಿಕ ಧನ ಸಂಪಾದನೆಯಿಂದ ಋಣ ಸಂದಾಯವಾಗಲಿದೆ. ಅದರಿಂದ ಮನಸ್ಸಿಗೆ ಸಮಾಧಾನವಿದೆ.

ಕುಂಭ: ಮನದನ್ನೆಯ ಸಹಕಾರ, ಪ್ರೀತಿ ವಿಶ್ವಾಸ ಹಿತವೆನಿಸಲಿದೆ. ವಿವಾಹಿತರಿಗೆ ಸಂತಾನಭಾಗ್ಯದ ಹುರುಪು ಕಂಡು ಬಂದೀತು. ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಸ್ಥಾನ ಪ್ರಾಪ್ತಿಯಿಂದ ಸಂತಸ ತಂದೀತು. ಆರೋಗ್ಯ ಸುಧಾರಣೆ.

ಮೀನ: ಕೌಟುಂಬಿಕವಾಗಿ ಉತ್ತಮ ಸಹಕಾರ ಕೊಡುತ್ತಿದ್ದ ಹಿರಿಯರು ಕ್ರಮೇಣ ದೂರ ಉಳಿಯುವ ಸುಳಿವು ದೊರೆತೀತು. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಆದಾಯವಿದ್ದರೂ ಖರ್ಚುವೆಚ್ಚಗಳಿಂದ ಆತಂಕ ಮೂಡಿಬಂದೀತು.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next