Advertisement

ನಿತ್ಯಭವಿಷ್ಯ: ಈ ರಾಶಿಯವರಿಗೆ ಶತ್ರುಗಳೇ ಅಚ್ಚರಿಗೊಳ್ಳುವಂತೆ ಯಶಸ್ಸು ಸಿಗಲಿದೆ !

07:42 AM Mar 31, 2021 | Team Udayavani |

ಮೇಷ: ರಾಜಕೀಯದಲ್ಲಿ ನಿಮ್ಮ ಪರಿಶ್ರಮವು ಸಾರ್ಥಕವಾಗಲಿದೆ. ಚಿತ್ರಕಲೆ, ಶಿಲ್ಪ, ಸಂಗೀತ ಇತ್ಯಾದಿಗಳಲ್ಲಿ ಕೀರ್ತಿ ಗಳಿಸುವ ಕಾಲವಿದು. ಗೃಹ ನಿವೇಶನಗಳ ವ್ಯಾಪಾರವು ಕುದುರೀತು. ಹೊಸ ಉದ್ಯೋಗದ ಪ್ರಾರಂಭವನ್ನು ಸದ್ಯ ಮಾಡದಿರಿ.

Advertisement

ವೃಷಭ: ವಿದ್ಯಾರ್ಥಿಗಳಿಗೆ ವಿದೇಶ ಯಾನದ ಕುರುಹು ಕಂಡುಬರಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ವಲ್ಪ ಕಠಿಣ ಪರಿಶ್ರಮದ ಅಗತ್ಯವಿದೆ. ಮಹಿಳೆಯರಿಗೆ ತಾಳ್ಮೆ ಸಮಾಧಾನದ ಅಗತ್ಯ ಕಂಡುಬರುವುದು. ವಾಹನ, ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಮಿಥುನ: ತಂದೆ ಮಕ್ಕಳೊಳಗೆ ಭಿನ್ನಾಭಿಪ್ರಾಯದ ಸಾಧ್ಯತೆ ಕಂಡುಬರುವುದು. ಜೀವನದಲ್ಲಿ ಉತ್ಕಟವಾದ ಇಚ್ಛೆ , ಸೂಕ್ಷ್ಮವಾದ ಬುದ್ಧಿ ಬಲ, ವಾಕ್ಚಾತುರ್ಯದಿಂದ ನಿಮಗೆ ಮುನ್ನಡೆ ಸಿಗಲಿದೆ. ಆಗಾಗ ಪ್ರತಿಕೂಲ ಫ‌ಲಗಳು ಅನುಭವಕ್ಕೆ ಬರಲಿದೆ.

ಕರ್ಕ: ಆಗಾಗ ದ್ವಂದ್ವ ಸ್ವಭಾವವು ಕಾಡಲಿದ್ದು ಮುನ್ನಡೆಗೆ ವಿಳಂಬವಾದೀತು. ಚಿಂತಿತ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬಂದರೂ ಅಡೆತಡೆಗಳು ಎದುರಾದಾವು. ಸಾಂಸಾರಿಕವಾಗಿ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ.

ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉದಾಸೀನತೆ ಕಾಡಲಿದೆ. ಸಂಚಾರದಲ್ಲಿ ಆಕಸ್ಮಿಕ ಅವಘಡಗಳ ಸಾಧ್ಯತೆ ಕಂಡು ಬಂದೀತು. ವ್ಯಾಪಾರ, ವ್ಯವಹಾರದಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಶತ್ರುಗಳ ಕಾಟ ಅನುಭವಿಸುವಂತಾದೀತು. ಶುಭವಿದೆ.

Advertisement

ಕನ್ಯಾ: ಸರಕಾರೀ ಅಧಿಕಾರಿಗಳಿಂದ ಭೀತಿ ಭಾದೆ ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಮೋಸ ವಂಚನೆ, ತೆರಿಗೆ ಅಧಿಕಾರಿಗಳ ಕೆಂಗಣ್ಣು ಕಂಡುಬರಲಿದೆ. ಸಾಹಿತಿ, ಕಲಾವಿದರಿಗೆ ಸಿನೆಮಾ ಪ್ರಪಂಚದವರಿಗೆ ಶ್ರಮಕ್ಕೆ ತಕ್ಕ ಫ‌ಲ ದೊರೆಯದು.

ತುಲಾ: ನಿರುದ್ಯೋಗಿಗಳು ಬಂದ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೂರಸಂಚಾರದಲ್ಲಿ ಆದಷ್ಟು ಜಾಗ್ರತೆ ವಹಿಸುವುದು ಉತ್ತಮ. ಪಾಲು ಬಂಡವಾಳದಲ್ಲಿ ನಿರೀಕ್ಷಿತ ಲಾಭವಿರದು. ಸಂಚಾರದಲ್ಲಿ ಅವಘಡದ ಸಾಧ್ಯತೆ ಇರುತ್ತದೆ.

ವೃಶ್ಚಿಕ: ಆರ್ಥಿಕವಾಗಿ ಧನಾರ್ಜನೆಯ ಮಾರ್ಗದಲ್ಲಿ ಹಲವಾರು ಅಡಚಣೆಗಳು ಕಂಡುಬರಲಿದೆ. ಅಭಿವೃದ್ಧಿಯು ಸ್ವಲ್ಪ ನಿಧಾನವಾಗಿ ಅನುಭವಕ್ಕೆ ಬರಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಉದ್ಯೋಗದಲ್ಲಿ ಭಡ್ತಿ ಕಂಡುಬಂದೀತು. ಮುನ್ನಡೆಯಿರಿ.

ಧನು: ಗೃಹ ನಿರ್ಮಾಣ ಕಾರ್ಯ, ಭೂಖರೀದಿಯು ಸುಲಭ ರೂಪದಲ್ಲಿ ಕೈಗೂಡಲಿದೆ. ಮುಖ್ಯವಾಗಿ ಸಾಂಸಾರಿಕ ಹೊಂದಾಣಿಕೆ ಅತೀ ಅಗತ್ಯವಿದೆ. ಒಮ್ಮೆಮ್ಮೊ ಶತ್ರುಗಳೇ ಅಚ್ಚರಿಗೊಳ್ಳುವಂತೆ ನಿಮಗೆ ಯಶಸ್ಸು ಒಲಿದು ಬಂದೀತು. ಉತ್ತಮ ಕಾಲ.

ಮಕರ: ಆತ್ಮೀಯ ಗೆಳೆಯರು ನಿಮ್ಮ ಮುನ್ನಡೆಗೆ ಅನುಕೂಲರಾದಾರು. ಕಾರ್ಯಕ್ಷೇತ್ರ ಹಾಗೂ ಸಾಮಾಜಿಕ ಜೀವನದಲ್ಲಿ ಯೋಗ್ಯ ಪುರಸ್ಕಾರವು ಲಭಿಸಲಿದೆ. ಧರ್ಮಕಾರ್ಯಗಳು ನಿಮ್ಮಿಂದ ನೆರವೇರಲಿದೆ. ಪುಣ್ಯ ಸಂಪಾದನೆಗೆ ಅವಕಾಶವಿದೆ.

ಕುಂಭ: ಸದಾ ಚಂಚಲ, ಉದ್ವೇಗ ಪ್ರವೃತ್ತಿಯವರಾದ ನೀವು ನಿಧಾನವಾಗಿ ಮುಂದುವರಿದರೆ ಕಾರ್ಯಗಳು ಕೈಗೂಡಲಿದೆ. ಬಂದ ಅವಕಾಶದಲ್ಲಿ ಸಂತೃಪ್ತಿಗೊಂಡು ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಅನುಕೂಲವಾಗಲಿದೆ. ಜವಾಬ್ದಾರಿ ಹೆಚ್ಚಲಿದೆ.

ಮೀನ: ಜವಾಬ್ದಾರಿಯುತ ಸ್ಥಾನಪ್ರಾಪ್ತಿ ವೃತ್ತಿರಂಗದಲ್ಲಿ ಅನುಭವಿಸುವಂತಾದೀತು. ಮಕ್ಕಳ ವಿದ್ಯಾಪ್ರಗತಿಯಿಂದಾಗಿ ಮನಸ್ಸು ಕೊಂಚ ಹಗುರವೆನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿಯ ಏರಿಳಿತದಿಂದ ವಿಳಂಬವಾದೀತು. ಎಚ್ಚರಿಕೆ ಇರಲಿ

Advertisement

Udayavani is now on Telegram. Click here to join our channel and stay updated with the latest news.

Next