Advertisement

ಈ ರಾಶಿಯವರಿಗಿಂದು ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು, ಕಾಳಜಿ ವಹಿಸಿರಿ

07:48 AM Feb 28, 2021 | Team Udayavani |

28-02-2021

Advertisement

ಮೇಷ: ಅನಿರೀಕ್ಷಿತ ಶುಭ ಸಮಾಚಾರದಿಂದ ಕಾರ್ಯ ಸಿದ್ಧಿಯಾಗಲಿದೆ. ಕಾರ್ಯರಂಗದಲ್ಲಿ ನಿಮ್ಮ ಸ್ವಯಂ ಪ್ರಜ್ಞೆಯೂ ಪ್ರಯತ್ನ ಬಲಕ್ಕೆ ಒತ್ತು ನೀಡಿದ್ದಲ್ಲಿ ಯಶಸ್ಸು ಕೂಡಿ ಬರಲಿದೆ. ಸಣ್ಣ ವಿಚಾರದಲ್ಲಿ ಉದ್ವೇಗ ಮಾಡದಿದ್ದರೆ ಉತ್ತಮ.

ವೃಷಭ: ನಿರುದ್ಯೋಗದಿಂದ ಅಲೆದು ಬೇಸತ್ತ ನಿಮಗೆ ಉದ್ಯೋಗ ದೊರೆತು ಸಂತಸವಾಗಲಿದೆ. ಹಣಕಾಸಿನ ವಿಚಾರದಲ್ಲಿ ಆತಂಕಕ್ಕೆ ಕಾರಣರಾಗದಿರಿ. ನೀವು ನಿಮ್ಮವರು ಎಂದೆಣಿಸಿದವರು ಕೈಚೆಲ್ಲಿ ಕೂತಾರು. ಬೇಸರಿಸದಿರಿ.

ಮಿಥುನ: ಕ್ರಯವಿಕ್ರಯದಲ್ಲಿ ತುಸು ಲಾಭ ಕಂಡು ಬರಲಿದೆ. ಅದರಿಂದ ಉತ್ಸಾಹ ದೊರಕೀತು. ಎಣಿಕೆಗಳೆಲ್ಲಾ ಈಡೇರುವುದರಿಂದ ಧೈರ್ಯ ಪ್ರಯತ್ನ ಬಲದಿಂದ ಕಾರ್ಯ ಸಾಧಿಸುವಿರಿ. ಹೊಸ ವ್ಯಾಪಾರ ವ್ಯವಹಾರ ಈಗ ಬೇಡ.

ಕರ್ಕ: ಹೊಸ ಉದ್ಯಮ ಯಾ ವ್ಯವಹಾರಕ್ಕೆ ಕೈ ಹಾಕಿದ್ದಲ್ಲಿ ಸ್ವಲ್ಪ ಸ್ವಲ್ಪ ಲಾಭಾಂಶ ಕಂಡು ಬಂದು ನಿಧಾನವಾಗಿ ಏರುಗತಿಯನ್ನು ಕಾಣಲಿದೆ. ಆಗಾಗ ಭಿನ್ನಾಭಿಪ್ರಾಯದಿಂದ ಸಾಂಸಾರಿಕ ಸುಖ ಕಿರಿಕಿರಿ ಎನಿಸಲಿದೆ. ತಾಳ್ಮೆ ಇರಲಿ.

Advertisement

ಸಿಂಹ: ವಿವಾಹೇತರರಿಗೆ ವೈವಾಹಿಕ ಜೋಡಣೆಯು ಸಂತಸ ತಂದೀತು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯು ಕಂಡು ಬರುವುದು. ಆದರೆ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಅತೀಸಹನೆ ನಿಮಗಿಂದು ಬೇಕು.

ಕನ್ಯಾ: ಉದ್ಯೋಗ ಹಾಗೂ ಕಾರ್ಯರಂಗದಲ್ಲಿ ಖಚಿತ ಹಾಗೂ ಸಮರ್ಪಕ ನಿಲುವು ಮುನ್ನಡೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ಆತ್ಮೀಯರು ಮಧ್ಯಸ್ಥಿಕೆ ವಹಿಸಬೇಕಾದ ಸಂದಿಗ್ಧತೆ ತೋರಿ ಬಂದೀತು. ಜಾಗ್ರತೆ ಮಾಡಿರಿ.

ತುಲಾ: ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ಕಂಡು ಬಂದೀತು. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬೇಕೇಬೇಕು.

ವೃಶ್ಚಿಕ: ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು. ಕಾಳಜಿ ವಹಿಸಿರಿ. ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗಲಿದೆ. ಗೃಹದಲ್ಲಿ ಅತೀ ಹೆಚ್ಚಿನ ಖರ್ಚು ತೋರಿ ಬಂದೀತು.

ಧನು: ಅವಕಾಶಗಳು ಕೂಡಿ ಬರಲು ನಿಧಾನವಾದರೂ ನಿಶ್ಚಿತ ರೂಪದಲ್ಲಿ ನಿಮಗೆ ಅಭಿವೃದ್ಧಿ ತೋರಿಬರುತ್ತದೆ. ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ತಂದೀತು.

ಮಕರ: ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಗಮನ ಹರಿಸಬೇಕಾಗುತ್ತದೆ. ಅವಿವಾಹಿತರ ಪ್ರಯತ್ನ ಬಲಕ್ಕೆ ಕಂಕಣ ಭಾಗ್ಯ ಪ್ರಾಪ್ತಿಯಾಗಲಿದೆ. ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸುವುದು.

ಕುಂಭ: ದಾಂಪತ್ಯದಲ್ಲಿ ಸ್ವಲ್ಪ ಸಮಾಧಾನ ಕಂಡು ಬರಲಿದೆ. ಪತ್ನಿಯ ಸಹಕಾರವು ನಿಮಗೆ ದೊರಕುವುದು. ಬರಬೇಕಾದ ಹಣವು ಕೈ ಸೇರಲಿದೆ. ಮಿತ್ರರಿಂದ ಸಹಕಾರವು ಕೂಡಿ ಬರುವುದು. ನೂತನ ದಂಪತಿಗಳಿಗೆ ಸಿಹಿ ಸುದ್ದಿ ಇದೆ.

ಮೀನ: ಕೌಟುಂಬಿಕವಾಗಿ ಬಂಧು ಭಾಂದವರ ಸಹಕಾರ ನಿಮಗಿದ್ದರೂ ವಿಶ್ವಾಸ ಅತೀ ಇಡದಿರಿ. ಅವಿವಾಹಿತರ ಪ್ರಯತ್ನ ಬಲಕ್ಕೆ ಕಂಕಣ ಭಾಗ್ಯ ಲಭಿಸಲಿದೆ. ಸ್ವಲ್ಪ ಸಮಾಧಾನ ಚಿತ್ತದಿಂದ ಆಲೋಚಿಸಿದರೆ ಉತ್ತಮ ಫ‌ಲವಿದೆ.

ಎನ್.ಎಸ್. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next