Advertisement

ಇಂದು ನಿಮ್ಮ ಗ್ರಹಬಲ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ!

07:46 AM Feb 14, 2021 | Team Udayavani |

14-02-2021

Advertisement

ಮೇಷ: ಆರೋಗ್ಯದ ವಿಚಾರದಲ್ಲಿ ಮೂಳೆ ಮುರಿತದಂತಹ ಅನಾಹುತಗಳು ಕಂಡುಬಂದಾವು. ಚಿತ್ರ ಜಗತ್ತಿನ ಉದ್ಯಮಿಗಳಿಗೆ ಲಾಭದಾಯಕ ಆದಾಯವಿಲ್ಲದಿದ್ದರೂ ಆರ್ಥಿಕವಾಗಿ ಕೊಂಚ ಚೇತರಿಕೆ ಇರುತ್ತದೆ.

ವೃಷಭ: ಹಂತಹಂತವಾಗಿ ಅಭಿವೃದ್ಧಿ ತೋರಿ ಬಂದರೂ ಸತತ ಪರಿಶ್ರಮ ಅತೀ ಅಗತ್ಯವಿದೆ. ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಜಲೋತ್ಪನ್ನಗಳ ವ್ಯವಹಾರದಲ್ಲಿ ವಿಘ್ನ ಭಯವಿದೆ. ಆರೋಗ್ಯದಲ್ಲಿ ಜಾಗ್ರತೆ.

ಮಿಥುನ: ಕಟ್ಟಡ, ಮನೆ ರಚನೆಗೆ ಕೈ ಹಾಕದಿರಿ. ಸರಕಾರಿ ವತಿಯಿಂದ ಆಗಬೇಕಾದ ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಕಂಡುಬಂದೀತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸ್ವಪ್ರಯತ್ನದ ಅಗತ್ಯವಿದೆ.

ಕರ್ಕ: ಅನಿರೀಕ್ಷಿತ ಹೊಸ ಸಂಬಂಧವೊಂದು ಅವಿವಾಹಿತರಿಗೆ ಶುಭ ಮಂಗಲ ಉಂಟು ಮಾಡಲಿದೆ. ತೀರ್ಥಯಾತ್ರೆ, ದೇವತಾ ಕಾರ್ಯದ ಚಿಂತನೆ ಕಾರ್ಯಗತವಾಗಲು ಸ್ವಲ್ಪ ಸಮಯ ತಗಲುವುದು.

Advertisement

ಸಿಂಹ: ವೃತ್ತಿರಂಗದಲ್ಲಿ ಶತ್ರುಗಳು ನಿಮ್ಮನ್ನು ಎದುರಿಸಿಯಾರು. ಭೀತಿ ಪಡಬೇಕಾಗಿಲ್ಲ. ದೈವಾನುಗ್ರಹವು ಸೂಕ್ತ ಸಮಯದಲ್ಲಿ ನಿಮಗೆ ದೊರಕಲಿದೆ. ಕಾರ್ಯಪ್ರವೃತ್ತರಾಗಿರಿ. ಕ್ಲೇಶ, ಚಿಂತೆ, ದುಗುಡವು ಕಡಿಮೆಯಾಗಲಿದೆ.

ಕನ್ಯಾ: ಮಾನಸಿಕವಾಗಿ ಸಮಾಧಾನ ಸಿಗಲಿದೆ. ದೂರ ಪ್ರಯಾಣವು ಒದಗಿ ಬಂದೀತು. ಉದ್ಯೋಗಿ ಮಹಿಳೆಯರಿಗೆ ಕೆಲಸದಲ್ಲಿ ಭಡ್ತಿ ದೊರಕಲಿದೆ. ಕುಟುಂಬ ಸ್ಥಾನದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚಾಗಲಿದೆ.

ತುಲಾ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ. ಅನಿರೀಕ್ಷಿತ ವಿವಾಹ ಸಂಬಂಧಗಳು ಕೂಡಿ ಬಂದರೂ ಕೈಗೂಡಲು ಸ್ವಲ್ಪ ಪ್ರಯತ್ನ ಬೇಕಾದೀತು. ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗದ ಅವಕಾಶವಿದೆ.

ವೃಶ್ಚಿಕ: ವಿಘ್ನ ಭಯದಿಂದಲೇ ಕೆಲಸ ಕಾರ್ಯದಲ್ಲಿ ಮುನ್ನಡೆ ಕಂಡುಬರಲಿದೆ. ಕುಟುಂಬ ಸ್ಥಾನದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ಸತಿಪತಿಯ ನಡುವೆ ಕೆಲವು ಮಾತಿಗೆ ಮಾತು ನಡೆದು ಬೇಸರವಾದೀತು.

ಧನು: ಕೆಲವೊಮ್ಮೆ ವಿಚಾರದಲ್ಲಿ ಋಣಾತ್ಮಕ ಚಿಂತನೆ ಕಂಡುಬರಲಿದೆ. ದುಡುಕಿನ ಪರಿಣಾಮದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ಆದಷ್ಟು ಜಾಗ್ರತೆಯಿಂದ ಇರುವುದು. ಮಾನಸಿಕ ವಾಗಿ ಚಂಚಲತೆಯನ್ನು ಬಿಟ್ಟುಬಿಡಿ.

ಮಕರ: ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗದಲ್ಲಿ ಮುಂಭಡ್ತಿ ಯಾ ಉತ್ತಮ ಸ್ಥಾನಮಾನದ ಸಾಧ್ಯತೆ ಇದೆ. ಅವಿವಾಹಿತರಿಗೆ ಅನಿರೀಕ್ಷಿತವಾಗಿ ಕಂಕಣಬಲದ ಯೋಗ ಕೂಡಿಬಂದೀತು. ಕಿರುಸಂಚಾರವು ಕೂಡಿಬರುವುದು.

ಕುಂಭ: ಒಳ್ಳೆಯ ವಿಚಾರವಾದಿ ಹಾಗೂ ಶ್ರಮಜೀವಿಗಳಾದ ನಿಮಗೆ ಒಳ್ಳೆಯ ಮನೋಭಾವವಿದ್ದರೂ ಇವರಲ್ಲಿ ಆಧ್ಯಾತ್ಮಿಕ ಮನೋಭಾವದ ಅರಿವು ಯಾರಿಗಾಗದು. ಆಡಂಬರವಿಲ್ಲದ, ನಿಶ್ಚಿಲವಾದ ಜೀವನ ನಿಮ್ಮದು.

ಮೀನ: ದೈವಭಕ್ತಿ, ಪ್ರಾಮಾಣಿಕತೆ ಇರುವ ನೀವು ಕೆಲವು ಉದ್ವೇಗಕ್ಕೆ ಸಿಲುಕಿ ಒರಟಾಗುವಿರಿ. ಆದರೆ ನಿಮ್ಮ ಮನಸ್ಸಿನ ಅರಿವು ಯಾರಿಗೂ ಇರದು. ಮಾತಿನಿಂದ ಗೌರವ, ಮಾತಿನಿಂದಲೇ ಜಗಳವು ಕಂಡುಬಂದೀತು.

 

ಎನ್.ಎಸ್. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next