Advertisement

ಇಂದಿನ ಗ್ರಹಬಲ: ಇಂದು ಈ ರಾಶಿಯವರ ಮನೋಭಾವಕ್ಕೆ ಚಂಚಲತೆ, ಅಸ್ಥಿರತೆ ಕಾಡಲಿದೆ!

07:55 AM Jan 29, 2021 | Team Udayavani |

29-01-2021

Advertisement

ಮೇಷ: ಆಗಾಗ ಸಮಸ್ಯೆಗಳು ತೋರಿಬಂದು ಆತಂಕಕ್ಕೆ ಕಾರಣವಾಗಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ವ್ಯಾಪಾರ, ವ್ಯವಹಾರಗಳು ಮಂದಗತಿಯಲ್ಲಿ ಸಾಗಲಿವೆ. ಜಾಗ್ರತೆ ಮಾಡಿದರೆ ಉತ್ತಮ. ವಿದ್ಯೆಯಲ್ಲಿ ಯಶಸ್ಸಿಲ್ಲ.

ವೃಷಭ: ನಿರೀಕ್ಷಿಸಿದ ಕೆಲಸಕಾರ್ಯಗಳು ದೈವಾನುಗ್ರಹದಿಂದ ನಡೆಯಲಿವೆ. ಆರ್ಥಿಕವಾಗಿ ಧನದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಫ‌ಲ ಸಿಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುವುದು. ಶುಭವಿದೆ.

ಮಿಥುನ: ಅಡಚಣೆಗಳಿಂದಲೇ ಕಾರ್ಯ ಸಾಧನೆಯಾಗಲಿದೆ. ಯೋಗ್ಯವಯಸ್ಕರಿಗೆ ಕಂಕಣ ಬಲಕ್ಕೆ ತಡೆ ಉಂಟಾದೀತು. ಮಾನಸಿಕವಾಗಿ ಸಮಾಧಾನ ಸಿಗದೆ ಕಳವಳವಾಗಲಿದೆ. ವ್ಯಾಪಾರಿ, ಉದ್ಯಮಿಗಳಿಗೆ ನಿರೀಕ್ಷಿತ ಲಾಭವಿಲ್ಲದೆ ಬೇಸರ.

ಕರ್ಕ: ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆದು ಕಾರ್ಯಗತವಾಗಲಿದೆ. ಆರ್ಥಿಕವಾಗಿ ಧನಾದಾಯವು. ಉತ್ತಮವಾಗಿದೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಶುಭವಿದೆ.

Advertisement

ಸಿಂಹ: ದಾಯಾದಿಗಳ ಬಗ್ಗೆ ಜಾಗ್ರತೆ ವಹಿಸಿರಿ. ಹಳೆಯ ಮಿತ್ರರ ಆಗಮನದಿಂದ ಸಂತಸವಾದೀತು. ಮಾನಸಿಕವಾಗಿ ಗೊಂದಲಗಳು ಕಾರ್ಯಸಾಧನೆಗೆ ಅಡ್ಡಿಯಾಗಲಿದೆ. ಶ್ರೀ ದೇವತಾ ದರ್ಶನ ಭಾಗ್ಯದಿಂದ ಮನಸ್ಸಿಗೆ ಸಮಾಧಾನವಾಗಲಿದೆ.

ಕನ್ಯಾ: ದೈಹಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಅದೇ ರೀತಿಯಲ್ಲಿ ವಾಹನ ಸಂಚಾರದಲ್ಲಿ ಕಾಳಜಿ ಇರಲಿ. ಕೂಡಿಟ್ಟ ಹಣ ಅನಾವಶ್ಯಕ ರೀತಿಯಲ್ಲಿ ಖರ್ಚಾಗಲಿದೆ. ದಾಂಪತ್ಯ ಜೀವನವು ಸುಖಮಯ. ವೃತ್ತಿರಂಗದಲ್ಲಿ ಕಿರಿಕಿರಿ ಹೆಚ್ಚು.

ತುಲಾ: ಮನೆಯಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯದಿಂದ ನಿಷ್ಟೂರವಾಗಲಿದೆ. ಅನಿರೀಕ್ಷಿತ ಅತಿಥಿಗಳ ಆಗಮನ ಸಂತಸ ತಂದೀತು. ಹಳೆಯ ಮಿತ್ರರ ಭೇಟಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ವ್ಯಾಪಾರದಲ್ಲಿ ಶುಭವಿದೆ.

ವೃಶ್ಚಿಕ: ಆರ್ಥಿಕವಾಗಿ ಧನಾದಾಯಕ್ಕೆ ಕೊರತೆ ಇರಲಾರದು. ದೈಹಿಕವಾಗಿ ಜಾಗ್ರತೆ ಮಾಡಿರಿ. ಮನೆಯಲ್ಲಿ ಮಕ್ಕಳ ಬಗ್ಗೆ ಚಿಂತೆ ತಂದೀತು. ವ್ಯಾಪಾರ, ವ್ಯವಹಾರಗಳು ಸರಾಗವಾಗಿ ನಡೆಯಲಿದೆ. ಕಾರ್ಮಿಕ ವರ್ಗಕ್ಕೆ ಅಡಚಣೆ ಕಂಡುಬರಲಿದೆ.

ಧನು: ಉದ್ಯೋಗಿಗಳಿಗೆ ಮುಂಭಡ್ತಿ ಯೋಗವಿದೆ. ವೃತ್ತಿಯಲ್ಲಿ ಸಮಾಧಾನಕರವಾದ ವಾತಾವರಣ ವಿರುತ್ತದೆ. ಸಾಂಸಾರಿಕ ಜೀವನ ತೃಪ್ತಿಕರವಾಗಿ ನಡೆಯಲಿದೆ. ದೂರಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಏಳುವರೆ ಶನಿ ಕಾಟವಿದೆ.

ಮಕರ: ಬಹುದಿನಗಳ ಬಳಿಕ ನಿಮ್ಮ ಕೆಲಸ ಕಾರ್ಯಗಳು ಒಂದೊಂದಾಗಿ ನೆರವೇರಲಿದೆ. ವೃತ್ತಿರಂಗದಲ್ಲಿ ಗೊಂದಲವಿರುತ್ತದೆ. ದೇಹಾರೋಗ್ಯವು ಸುಧಾರಿಸಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಆಗಾಗ ಸಂಚಾರ ಒದಗಿ ಬರುವುದು.

ಕುಂಭ: ಸಾಂಸಾರಿಕವಾಗಿ ತುಸು ಸಮಾಧಾನ ಸಿಗಲಿದೆ. ಮಕ್ಕಳಿಂದ ಕಿರಿಕಿರಿ ಇರುತ್ತದೆ. ಭೂಖರೀದಿಗೆ ಅಡಚಣೆಗಳಿರುತ್ತವೆ. ವೃತ್ತಿರಂಗದಲ್ಲಿ ಸಮಾಧಾನವಿರದು. ಶ್ರೀ ದೇವರ ದರ್ಶನ ಭಾಗ್ಯದಿಂದ ಮಾನಸಿಕವಾಗಿ ನೆಮ್ಮದಿಯು ದೊರಕಲಿದೆ.

ಮೀನ: ನಿಮ್ಮ ಮನೋಭಾವಕ್ಕೆ ಚಂಚಲತೆ, ಅಸ್ಥಿರತೆ ಕಾಡಲಿದೆ. ಮನೆಯಲ್ಲಿ ಶುಭ ಕಾರ್ಯದ ಚಿಂತನೆಯು ಫ‌ಲಪ್ರದವಾದೀತು. ಕೌಟುಂಬಿಕವಾಗಿ ಶುಭಮಂಗಲ ಕಾರ್ಯಗಳ ಉತ್ಸಾಹವು ತುಂಬಲಿದೆ. ಮುನ್ನಡೆಯಿರಿ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next