Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ!

08:31 AM Jan 26, 2021 | Team Udayavani |

26-01-2021

Advertisement

ಮೇಷ: ವೃತ್ತಿರಂಗದಲ್ಲಿ ಅಭಿವೃದ್ಧಿದಾಯಕವಾದ ಬೆಳವಣಿಗೆಗಳು ಕಂಡುಬಂದರೂ ತುಸು ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಮರ್ಪಣಾ ಭಾವ ಇರತಕ್ಕದ್ದು.

ವೃಷಭ: ಅವಿವಾಹಿತರು ಬಂದ ಸಂಬಂಧಗಳನ್ನು ಸದುಪಯೋಗಿಸಿಕೊಂಡಲ್ಲಿ ಮಾತ್ರ ವೈವಾಹಿಕ ಭಾಗ್ಯವು ಕೈಗೂಡಲಿದೆ. ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರುಕುಳದಿಂದ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದು ಬೇಸರವಾದೀತು.

ಮಿಥುನ: ನಿಮ್ಮ ನಿರ್ಧಾರಗಳು ಅಚಲವಾಗಿರದೆ ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿದೆ. ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ. ವೃತ್ತಿರಂಗದ ಯೋಜನೆಯೊಂದು ಸಾಕಾರಗೊಳ್ಳಲಿದೆ. ಅಧಿಕ ಖರ್ಚು ಬರಲಿದೆ.

ಕರ್ಕ: ಹಂತ ಹಂತವಾಗಿ ಶತ್ರುಬಾಧೆಯು ಕಡಿಮೆಯಾಗಲಿದೆ. ಅಲೆದಾಟವಿದ್ದರೂ ಕಾರ್ಯಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ವಿಶೇಷ ಪ್ರಯಾಣವು ನಿಮಗೆ ಶುಭ ತಂದೀತು. ದೇವತಾನುಗ್ರಹಕ್ಕಾಗಿ ಪ್ರಾರ್ಥಿಸುವುದು.

Advertisement

ಸಿಂಹ: ಗೃಹದಲ್ಲಿ ಸಣ್ಣ ಸಣ್ಣ ಮನಸ್ತಾಪದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ತಾಳ್ಮೆ ಸಹನೆ ಅಗತ್ಯವಿದೆ. ಚಿಂತೆಯನ್ನು ಬದಿಗೊತ್ತಿರಿ. ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫ‌ಲಕಾರಿಯಾಗಲಿದೆ. ಸಂತೋಷದಿಂದಿರಿ.

ಕನ್ಯಾ: ನವದಂಪತಿಗಳಿಗೆ ಸಂತಾನಭಾಗ್ಯದ ಕುರುಹು ಕಂಡುಬಂದು ಸಂತಸವಾಗಲಿದೆ. ಅಧ್ಯಯನದಲ್ಲಿ ಸಮರ್ಪಣಾ ಮನೋಭಾವ ಸಾರ್ಥಕ್ಯ ತಂದು ಕೊಡಲಿದೆ. ವಾತ, ಪಿತ್ತ, ಕಫ‌ದ ಬಾಧೆಯು ಕಾಡಲಿದೆ.

ತುಲಾ: ಹೊಸತನ ಕಾರ್ಯಸಾಧನೆಗೆ ಪೂರಕವಾಗಲಿದೆ. ಸಾಂಸಾರಿಕವಾಗಿ ಸಂತಸದ ವಾತಾವರಣ ಉತ್ಸಾಹಿಕರನ್ನಾಗಿ ಮಾಡಲಿದೆ. ವೈವಾಹಿಕ ಭಾಗ್ಯ ಫ‌ಲ ನೀಡಲು ಹೊಂದಾಣಿಕೆಯ ಅಗತ್ಯವಿದೆ. ಚಂಚಲತೆ ಕಾಡಬಹುದು.

ವೃಶ್ಚಿಕ: ಆರೋಗ್ಯಭಾಗ್ಯವು ಹಂತಹಂತವಾಗಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವು ಬಾಳಿಗೆ ಭದ್ರತೆಯನ್ನು ನೀಡಲಿದೆ. ಕಾರ್ಯರಂಗದಲ್ಲಿ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗಬಹುದಾಗಿದೆ.

ಧನು: ಬೇಸಾಯ, ಕೃಷಿಯ ಅಭಿರುಚಿಯನ್ನು ಹೆಚ್ಚಿಸಿಕೊಂಡು ಕಠಿಣ ಪರಿಶ್ರಮದಿಂದ ದುಡಿದಲ್ಲಿ ಹೆಚ್ಚಿನ ಲಾಭವು ನಿಮಗೆ ದೊರಕಲಿದೆ. ಕೋರ್ಟು ಕಚೇರಿ ವ್ಯವಹಾರಗಳು ಅಸಾಧ್ಯವಾದುದನ್ನು ಸಾಧ್ಯ ಮಾಡಿಸಲಿದೆ.

ಮಕರ: ಹೂಡಿಕೆಗಳು ತಕ್ಕಮಟ್ಟಿಗೆ ಲಾಭಕರವಾಗಿ ಕಂಡುಬಂದಾವು. ಶತ್ರುಬಾಧೆ-ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಇರದು. ಆರ್ಥಿಕವಾಗಿ ಕಿರಿಕಿರಿಯನ್ನು ಅನುಭವಿಸುವಿರಿ. ಕಾಳಜಿ ಮುಖ್ಯವಾಗಿದೆ.

ಕುಂಭ: ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿಬಂದರೂ ಅದನ್ನು ಸಹಿಸಿ ಮುನ್ನಡೆದರೆ ಉತ್ತಮ. ಯಾವುದೇ ವಾದ ವಿವಾದಗಳಿಗೆ ಸಿಲುಕದಿರಿ. ಹಿರಿಯರ ಆರೋಗ್ಯಕ್ಕಾಗಿ ಅಲೆದಾಟವು ತೋರಿಬರುವುದು.

ಮೀನ: ಕುಟುಂಬ ವರ್ಗದಲ್ಲಿ ಸಹಮತವಿರದೆ ಕೆಲಸಕಾರ್ಯಗಳು ವಿಳಂಬಗತಿ ಪಡೆದಾವು. ಕಾರ್ಯಕ್ಷೇತ್ರದಲ್ಲಿ ಬುದ್ಧಿಜೀವಿಗಳಿಗೆ ಮುಖಭಂಗವಾದೀತು. ರಾಜಕೀಯರಂಗದಲ್ಲಿ ವಂಚನೆಗೆ ಆಸ್ಪದವಿರುತ್ತದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next