Advertisement

Horoscope: ಈ ರಾಶಿಯವರಿಗಿಂದು ಉದ್ಯೋಗ ಜವಾಬ್ದಾರಿಯ ನಡೆಯಿಂದ ಕೀರ್ತಿ ತೃಪ್ತಿಯಾಗಲಿದೆ

07:28 AM Jul 20, 2023 | Suhan S |

ಮೇಷ: ದೈಹಿಕ ಮಾನಸಿಕ ಸಂತುಷ್ಟಿ. ವಿದ್ಯಾರ್ಥಿಗಳಿಗೆ ಅನುಕೂಲ. ಅಭಿವೃದ್ಧಿ, ಗೌರವಾದರಗಳು ಲಭಿಸುವ ನಿರೀಕ್ಷೆ. ಉದ್ಯೋಗ ಜವಾಬ್ದಾರಿಯ ನಡೆಯಿಂದ ಕೀರ್ತಿ ತೃಪ್ತಿ. ನಿಮ್ಮ ವೃತ್ತಿ ನೈಪುಣ್ಯದಿಂದ ಎಲ್ಲರ ಮನ ಗೆಲ್ಲುವಿರಿ.

Advertisement

ವೃಷಭ: ಆರೋಗ್ಯ ಸುದೃಢ. ಸಮಾಜಮುಖ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಜನಮನ್ನಣೆ. ವಾಹನ ಸೌಕರ್ಯ ಪ್ರಾಪ್ತಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಕಾರ್ಯಗಳನ್ನು ನೆರವೇರಿಸಿದ ತೃಪ್ತಿ. ಗೃಹದಲ್ಲಿ ಸಂಭ್ರಮ.

ಮಿಥುನ: ಅಧ್ಯಯನದಲ್ಲಿ ಆಸಕ್ತಿ. ಸ್ವಾವಲಂಬನೆಯ ಗಂಭೀರ ವ್ಯವಹಾರದಿಂದ ಯಶಸ್ಸು. ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ವಿಷಯಗಳಲ್ಲಿ ಎಚ್ಚರ ತಪ್ಪಿದರೆ ನಷ್ಟ ಸಂಭವ. ಗುರು ಹಿರಿಯರಿಗೆ ಸಂತೋಷ.

ಕರ್ಕ: ಮನೋರಂಜನೆಯಿಂದ ಸಮಯ ಕಳೆಯುವಿಕೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಆಸ್ತಿ ಹಾಗೂ ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಜಲೋತ್ಪನ್ನ  ವಿಕ್ರಯದಿಂದ ಲಾಭ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ನಿರೀಕ್ಷಿತ ಧನ ಲಾಭದ ಸಾಧ್ಯತೆ.

ಸಿಂಹ: ಹೆಚ್ಚು ದೈಹಿಕ ಶ್ರಮದ ಕಾರ್ಯಗಳಲ್ಲಿ ತೊಡಗುವಿಕೆ. ಪರೋಪಕಾರ ಮಾಡುವಾಗ ಎಚ್ಚರ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಹಣಕಾಸಿನ ವಿಚಾರಗಳಲ್ಲಿ ದುಸ್ಸಾಹಸ ಬೇಡ. ಸಂಸಾರ ಸುಖ ತೃಪ್ತಿಕರ.

Advertisement

 ಕನ್ಯಾ: ದೇವತಾ ಕಾರ್ಯಗಳಲ್ಲಿ ಶ್ರದ್ಧೆ ವಾಕ್ಚಾತುರ್ಯದಿಂದ ಕೂಡಿದ ಕಾರ್ಯವೈಖರಿ. ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ. ಪರಿಶ್ರಮದಿಂದ ಅಧಿಕ ಧನಾರ್ಜನೆ. ಸಕಲರಿಂದಲೂ ಗೌರವ ಪ್ರಾಪ್ತಿ ಸಂಭವ. ಆರೋಗ್ಯ ಸುಧಾರಣೆ.

ತುಲಾ: ಆರ್ಥಿಕ ವಿಚಾರಕ್ಕೆ ಅಧಿಕ ಗಮನ. ಸಾಹಸ ಕಾರ್ಯ ಸಾಧ್ಯ. ಜನಸಂಪರ್ಕ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ ಚಾತುರ್ಯಕ್ಕೆ ಬೆಲೆ. ಆಸ್ತಿ ವ್ಯವಹಾರದಲ್ಲಿ ಗೊಂದಲ. ಅವಿವಾಹಿತರಿಗೆ ವಿವಾಹ ಭಾಗ್ಯ.

ವೃಶ್ಚಿಕ: ತಾಳ್ಮೆ, ಸಹನೆ ಇವೆರಡರಿಂದ ಗೌರವ ವೃದ್ಧಿ. ವರಮಾನ ಹೆಚ್ಚಳ. ವಿದ್ಯಾರ್ಥಿಗಳಿಗೆ ಸಾಧನೆಗೆ ಅನುಕೂಲ. ಜನಮನ್ನಣೆ ಪ್ರಾಪ್ತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರುವ ಸಾಧ್ಯತೆ.

ಧನು: ಸಂಪೂರ್ಣಳ ದೇವತಾ ನುಗ್ರಹದಿಂದ ಧಾರ್ಮಿಕ ಕಾರ್ಯಗಳ ನೇತೃತ್ವ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ ಪ್ರೋತ್ಸಾಹ. ಆಸ್ತಿ ವಿಚಾರದಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ.

ಮಕರ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ  ಪರಿಶ್ರಮಕ್ಕೆ ಪ್ರತಿಫ‌ಲ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ. ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ.ಆರೋಗ್ಯದ ಬಗ್ಗೆ ಗಮನವಿರಲಿ.

ಕುಂಭ: ದೂರ ಪ್ರಯಾಣ. ಆಸ್ತಿ, ಹೂಡಿಕೆ ವ್ಯವಹಾರ ಗಳಲ್ಲಿ ಪ್ರಗತಿ. ಉತ್ತಮ ಧನ ಸಂಪಾದನೆ. ಸಂದರ್ಭಕ್ಕೆ  ಸರಿಯಾದ ವಾಕ್‌ ಚಾತುರ್ಯದಿಂದ ಲಾಭ. ಆಪ್ತಮಿತ್ರರ ಸಹಾಯ. ಮಕ್ಕಳಿಂದ ಸಂತೋಷ.

ಮೀನ: ದೂರ ಪ್ರಯಾಣ. ಹೂಡಿಕೆಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಸಂದರ್ಭಕ್ಕೆ ಸರಿಯಾದ ಸ್ಪಂದನದಿಂದ ಜನಮನ್ನಣೆ ಸಂಪಾದನೆ. ಗುರು ಹಿರಿಯರ ಪ್ರೋತ್ಸಾಹ.

Advertisement

Udayavani is now on Telegram. Click here to join our channel and stay updated with the latest news.

Next