Advertisement

ಈ ರಾಶಿಯವರಿಗಿಂದು ಗಣ್ಯ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಹವಾಸವು ಉನ್ನತಿ ತಂದುಕೊಡಲಿದೆ

08:25 AM Jan 19, 2021 | Team Udayavani |

19-01-2021

Advertisement

ಮೇಷ: ಅವಿವಾಹಿತರಿಗೆ ಉತ್ತಮ ಸಂಬಂಧಗಳಿಗಾಗಿ ತುಂಬಾ ಪ್ರಯಾಸ ಪಡಬೇಕಾಗಬಹುದು. ದಿನವಿಡೀ ಕಠಿಣ ಪರಿಶ್ರಮದಿಂದ ದುಡಿವ ನಿಮಗೆ ಉತ್ತಮ ಫ‌ಲಿತಾಂಶ ದೊರಕದು. ಕಿರು ಪ್ರಯಾಣ ಬರಬಹುದು.

ವೃಷಭ: ನಿಮ್ಮ ಮನಸ್ಸಿಗೆ ಸಮಾಧಾನವಾಗುವ ಘಟನೆಗಳು ನಡೆದೀತು. ಆರೋಗ್ಯದ ಏರುಪೇರಿನಿಂದ ಮನಸ್ಸು ವ್ಯಾಕುಲಗೊಂಡೀತು. ಆದರೆ ಹೆದರುವ ಅವಶ್ಯಕತೆ ಇಲ್ಲ. ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇದೆ.

ಮಿಥುನ: ಮನಸ್ಸು ಸಂತೋಷದಿಂದ ಹಾರಾಡಲಿದೆ. ಅಪರಿಚಿತರ ಭೇಟಿಯಾಗುವ ಸುಸಂದರ್ಭ ಬರಲಿದೆ. ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಭಡ್ತಿಯ ಸಂಭವವಿದೆ. ಕಿರು ಸಂಚಾರ ಯೋಗವಿದೆ.

ಕರ್ಕ: ಮನೆಯಲ್ಲಿ ಮಕ್ಕಳಿಂದ ಸಂತಸ, ಸಮಾಧಾನ ಸಿಗಲಿದೆ. ವಿದ್ಯಾರ್ಥಿವರ್ಗಕ್ಕೆ ಅಭಿವೃದ್ಧಿ ಕಂಡು ಬರಲಿದೆ. ನೀವು ಹಾಕಿದ ಪ್ರಯತ್ನ ಸಾರ್ಥಕವಾಗಲಿದೆ. ದೇಹಾರೋಗ್ಯದಲ್ಲಿ ಶೀತ, ಕಫ‌ದ ಭಾದೆಯು ಕಂಡು ಬರಲಿದೆ.

Advertisement

ಸಿಂಹ: ಮನಸ್ಸು ಇಬ್ಬಗೆಯಲ್ಲಿ ಆಲೋಚನೆಗೆ ಒಳಗಾದೀತು. ನೀವು ಆಲೋಚಿಸಿದ ಕಾರ್ಯವು ಕೈಕೊಂಡು ಸಮಾಧಾನವಾದೀತು. ದಿನದಿಂದ ದಿನ ಮನಸ್ಸಿನ ಬೇಗೆಯು ಕಡಿಮೆಯಾಗಲಿದೆ. ಅಲ್ಪರ ಸಹವಾಸ ಬೇಡ.

ಕನ್ಯಾ: ನಿಮ್ಮ ಪತ್ನಿಯ ಸಹವಾಸದಿಂದ ನಿಮಗೆ ಸಮಾಧಾನ ಹಾಗೂ ಶಾಂತಿ ದೊರಕಲಿದೆ. ನವ ವಿವಾಹಿತರಿಗೆ ಪತ್ನಿಯನ್ನು ಅರ್ಥೈಸಿಕೊಂಡು ನಡೆಯುವುದೇ ದೊಡ್ಡ ಸಾಹಸವಾದೀತು. ಸಮಾರಂಭದಲ್ಲಿ ಭಾಗಿಯಾಗುವಿರಿ.

ತುಲಾ: ಗಣ್ಯ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಹವಾಸವು ನಿಮಗೆ ಉನ್ನತಿ ತಂದುಕೊಡಲಿದೆ. ಆದರೂ ಖರ್ಚುವೆಚ್ಚಗಳಲ್ಲಿ ನಿಗಾವಹಿಸಿರಿ. ಅತೀ ಸ್ನೇಹ, ಅತೀ ಸಲುಗೆ ನಿಮ್ಮನ್ನು ಅಧಃಪತನಕ್ಕೊಯ್ಯಲಿದೆ. ಜಾಗ್ರತೆ ವಹಿಸಿರಿ.

ವೃಶ್ಚಿಕ: ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣವು ಕೂಡಿ ಬರಲಿದೆ. ಆದರೂ ನಿಮ್ಮ ಜಾಗ್ರತೆಯಲ್ಲಿ ನೀವಿದ್ದರೆ ಉತ್ತಮ. ಧರ್ಮವನ್ನು ಬಿಡಬೇಡಿ. ಹಿರಿಯರಿಗೆ ಗೌರವ ಹಾಗೂ ಸತ್ಕರಿಸುವದನ್ನು ಮರೆಯದಿರಿ. ಉತ್ತಮ ಲಾಭವಿದೆ.

ಧನು: ನಿಮ್ಮ ಧೈರ್ಯ, ಆತ್ಮವಿಶ್ವಾಸ ಹಾಗೂ ಧನಾತ್ಮಕ ಚಿಂತನೆಗಳು ನಿಮ್ಮನ್ನು ಮುನ್ನಡೆಸಿಕೊಂಡು ಹೋಗಲಿದೆ. ಸ್ವಲ್ಪ ಎಡರು ತೊಡರುಗಳು ಕಂಡು ಬಂದರೂ ನೀವು ಮುಂದೆ ಹಾಕಿದ ಹೆಜ್ಜೆಯನ್ನು ಹಿಂದಿಡದಿದ್ದರೆ ಒಳ್ಳೆಯದು.

ಮಕರ: ದಿನದಿಂದ ದಿನಕ್ಕೆ ಉತ್ತಮ ಅಭಿವೃದ್ಧಿಗೆ ಪೂರಕವಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುವಿರಿ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಿರಿ. ಗೃಹದಲ್ಲಿ ತೃಪ್ತಿ ಸಮಾಧಾನವಿದೆ.

ಕುಂಭ: ಕಾರ್ಯಕ್ಷೇತ್ರದಲ್ಲಿ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಾಧಾನವಿರದು. ಅಲ್ಲದೆ ಖರ್ಚು ವೆಚ್ಚವು ಅತೀಯಾದೀತು. ದೇವತಾ ಕಾರ್ಯಾಧಿ ಪ್ರಯಾಣ ಹಾಗೂ ಖರ್ಚು ಬರುವುದು.

ಮೀನ: ಮನೆ ಮಂದಿಯ ವಿಶ್ವಾಸವನ್ನು ಇಟ್ಟುಕೊಂಡನೆ ಉತ್ತಮ. ವಿಶ್ವಾಸಘಾತಕತನದ ಕೆಲಸ ಮಾಡಬೇಡಿರಿ. ನಿಮ್ಮ ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಆದರೆ ಮೇಲಾಧಿಕಾರಿಗಳ ಕಾಟವಿರುತ್ತದೆ.

ಎನ್‌.ಎಸ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next