Advertisement

Daily Horoscope; ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿಬರುವ ಸಮಯ

11:53 PM May 05, 2023 | Team Udayavani |

ಮೇಷ
ಸಣ್ಣ ಪ್ರಯಾಣ. ಉತ್ತಮ ಧನಾರ್ಜನೆ ಯಿದ್ದರೂ ಖರ್ಚಿನ ಬಗ್ಗೆ ಹಿಡಿತವಿರಲಿ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಬೆಳೆಸಿ ಕೊಳ್ಳಿ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ.

Advertisement

ವೃಷಭ
ದೈಹಿಕ ಮತ್ತು ಮಾನಸಿಕ ನೆಮ್ಮದಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಯಾದ ಸಂತೋಷ. ದಂಪತಿಗಳಲ್ಲಿ ತಾಳ್ಮೆ ಇರಲಿ. ಸಹೋದರರಿಂದ ಸಂತೋಷದ ವಾರ್ತೆ ಸಿಗಲಿದೆ. ಹಿರಿಯರ ಬಗ್ಗೆ ಗಮನಹರಿಸಿ.

ಮಿಥುನ
ಮಕ್ಕಳಿಂದ ಸಂತೋಷ. ಉದ್ಯೋಗ ದಲ್ಲಿ ನಿರೀಕ್ಷಿತ ಸ್ಥಾನಮಾನ, ಗೌರವ ಪ್ರಾಪ್ತಿ. ಮಾತಿನ ಮೇಲೆ ಹಿಡಿತವಿರಲಿ. ಆರೋಗ್ಯ ಉತ್ತಮ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫ‌ಲ. ಅನಗತ್ಯ ಖರ್ಚು ವೆಚ್ಚಗಳಿಗೆ ಆಸ್ಪದ ನೀಡಬೇಡಿ.

ಕಟಕ
ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ನೂತನ ಮಿತ್ರರ ಭೇಟಿ. ಕುಟುಂಬ ಸಮೇತ ಸಣ್ಣ ಪ್ರಯಾಣ. ಸುದೃಢ ಆರೋಗ್ಯ. ಮಕ್ಕಳ ವಿಷಯದಲ್ಲಿ ಜಾಗ್ರತೆ ಅಗತ್ಯ. ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಮಾನಸಿಕವಾಗಿ ಆಹ್ಲಾದಕರ ದಿನ.

ಸಿಂಹ
ಜಲೋತ್ಪನ್ನ ಪದಾರ್ಥಗಳ ಕ್ರಯ- ವಿಕ್ರಯದಿಂದ ಲಾಭ. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು. ದೇವತಾ ಕಾರ್ಯಗಳಿಗಾಗಿ ಧನವ್ಯಯ.ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಬಂಧುಮಿತ್ರರ ಸಮಾಗಮ.

Advertisement

ಕನ್ಯಾ
ಬರಬೇಕಾದ ಸಂಪತ್ತು ಸಿಗುವ ಸಮಯ. ಕುಟುಂಬದವರೊಂದಿಗೆ ಸಂತೋಷದಿಂದ ಕೂಡಿದ ದಿನ. ಅನ್ಯರ ಮಾತಿಗೆ ಮರುಳಾಗದಿರಿ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಹಿರಿಯರ ಬಗ್ಗೆ ಗೌರವದಿಂದ ವರ್ತಿಸಿ.

ತುಲಾ
ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯದಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿದ ಜವಾಬ್ದಾರಿ. ದೀರ್ಘ‌ ಪ್ರಯಾಣದಿಂದ ದೇಹಾಯಾಸ. ನಿರೀಕ್ಷಿತ ಸ್ಥಾನಮಾನದ ಗೌರವ.

ವೃಶ್ಚಿಕ
ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ ಯಾಗುವಿರಿ. ಬಂಧುಮಿತ್ರರಿಂದ ಉತ್ತಮ ಪ್ರೋತ್ಸಾಹ. ಜಲೋತ್ಪನ್ನ ವಸ್ತುಗಳಿಂದ ಲಾಭ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ದಿನ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಪರ ಬದಲಾವಣೆ.

ಧನು
ಕುಟುಂಬದವರಿಂದ ಸಂತೋಷ. ದೂರದ ವ್ಯವಹಾರ ನಿಮಿತ್ತ ಪ್ರಯಾಣ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿಬರುವ ಸಮಯ. ದೇವತಾ ಕಾರ್ಯಗಳಿಗಾಗಿ ಖರ್ಚು. ತಾಳ್ಮೆ ಸಮಾಧಾನದಿಂದ ವ್ಯವಹರಿಸಿ..

ಮಕರ
ಸ್ಥಾನ – ಗೌರವ ಆದರಾದಿ ಪ್ರಾಪ್ತಿ. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಅನ್ಯರ ಮಾತಿಗೆ ಬೆಲೆ ಕೊಡದಿರಿ. ಸಾಂಸಾರಿಕವಾಗಿ ಉತ್ತಮವಾದ ದಿನ. ಚಂಚಲತೆಗೆ ಒಳಗಾಗದಿರಿ. ಮಕ್ಕಳಿಂದ ಶುಭ ಸುದ್ದಿ.

ಕುಂಭ
ಪ್ರಗತಿಪರ ಯೋಜನೆಯಿಂದ ಅಭಿವೃದ್ಧಿ. ಚರ್ಚೆಗೆ ಅವಕಾಶ ನೀಡದಿರಿ. ಕೆಲಸ – ಕಾರ್ಯಗಳಲ್ಲಿ ಅಭಿವೃದ್ಧಿದಾಯಕ ಬೆಳವಣಿಗೆ. ಆರೋಗ್ಯ ಸುದೃಢ. ಖರ್ಚಿನ ಮೇಲೆ ಹಿಡಿತವಿರಲಿ. ಸಮಾರಂಭಗಳಲ್ಲಿ ಭಾಗಿಯಾದ ಸಂತಸ .

ಮೀನ
ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ವಿದ್ಯಾರ್ಥಿ ಗಳು ಅಧ್ಯಯನದ ಕಡೆ ಗಮನಹರಿಸಿ ನಿರೀಕ್ಷಿತ ಗುರಿ ಸಾಧಿಸಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ಕುಟುಂಬದವರೊಂದಿಗೆ ಸಣ್ಣ ಪ್ರಯಾಣ ಯೋಗ. ಧನಾರ್ಜನೆಯಲ್ಲಿ ಪ್ರಗತಿ. ಅನಿರೀಕ್ಷಿತವಾಗಿ ದೂರದ ಮಿತ್ರರ ಭೇಟಿಯಿಂದ ಸಂತಸ.

Advertisement

Udayavani is now on Telegram. Click here to join our channel and stay updated with the latest news.

Next