Advertisement

ಅಪ್ಪ-ಮಕ್ಕಳ ಆಟ ಎಲ್ಲವೂ ಗೊತ್ತಿದೆ

06:00 AM Nov 01, 2018 | Team Udayavani |

ಶಿವಮೊಗ್ಗ: ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಡಿಯೂರಪ್ಪ ಮಾಡಿದ್ದೆಲ್ಲ ಗೊತ್ತು ಎಂದು ಹೇಳಿದ್ದಾರೆ. ಆದರೆ, ಅಧಿಕಾರಕ್ಕಾಗಿ ಈ ಅಪ್ಪ-ಮಕ್ಕಳು ಇಷ್ಟು ವರ್ಷ ಆಡಿದ ಆಟವೆಲ್ಲವೂ ನನಗೆ ಗೊತ್ತಿದೆ. ಇವರಿಬ್ಬರ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಕಡಿಮೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

Advertisement

ಬುಧವಾರ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಜತೆಗಿನ ಮೈತ್ರಿ ಸರ್ಕಾರದಿಂದ ಹೊರ ಬಂದು ಬಿಜೆಪಿ ಜತೆ ಮುಖ್ಯಮಂತ್ರಿಯಾಗುವ ಏಕೈಕ ಉದ್ದೇಶದಿಂದ ನನ್ನ ಬಳಿ ಕುಮಾರಸ್ವಾಮಿ ಗೋಗರೆದಿದ್ದರು. ಮೊದಲು ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ಕೊಡುವ ವಿಚಾರವಾಗಿ ರಾಷ್ಟ್ರೀಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರು ಹುಷಾರಾಗಿರಿ ಎಂದು ಮೊದಲೇ ಹೇಳಿದ್ದರು. ಆದರೆ, ನಾವು ಇವರನ್ನು ನಂಬಿ ಮೊದಲ ಆದ್ಯತೆ ಕೊಟ್ಟು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟೆವು. ಅಧಿಕಾರ ಅನುಭವಿಸಿದ ನಂತರ ಇದೇ ದೇವೇಗೌಡರು ಕರಾರು ಹಾಕಿದರು. ಇದನ್ನು ಒಪ್ಪಿಕೊಳ್ಳದೆ ಹೊರ ಬಂದಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಈ ಅಪ್ಪ-ಮಕ್ಕಳ ಆಟ ಎಷ್ಟು ಹೇಳಿದರೂ ಕಡಿಮೆಯೇ ಎಂದು ಕುಮಾರಸ್ವಾಮಿ ಹೇಳಿಕೆಗೆ ಖಾರವಾಗಿ ಉತ್ತರಿಸಿದರು.

ಅಕ್ರಮ ಗಣಿಗಾರಿಕೆಯ ಬಗ್ಗೆ ಆರೋಪಿಸುವ ಕುಮಾರಸ್ವಾಮಿ ಅವರು ಮೈಸೂರಿನ ಸುಮಾರು 400 ಎಕರೆ ಜಮೀನನ್ನು ಇವರ ಕುಟುಂಬಕ್ಕೆ ಮಾಡಿಸಿಕೊಂಡಿದ್ದು ಹೇಗೆ…? ಇವರ ಅವ್ಯವಹಾರಗಳು ಇನ್ನೂ ಸಾಕಷ್ಟಿವೆ. ನಾನೇಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಒಬ್ಬ ಯಡಿಯೂರಪ್ಪನನ್ನು ಸೋಲಿಸಲು ರಾಜ್ಯದ ಇಡೀ  ಆಡಳಿತ ವ್ಯವಸ್ಥೆ ಯತ್ನಿಸುತ್ತಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌
ಮುಖಂಡರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.

● ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next