Advertisement

ನನ್ನ ಪರಿಸ್ಥಿತಿ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ: ಡಿ ಕೆ ಶಿವಕುಮಾರ್

09:44 AM Nov 18, 2019 | Team Udayavani |

ಬೆಂಗಳೂರು:  ಪಕ್ಷದ ಅಧ್ಯಕ್ಷರು ನಮ್ಮ ಪಕ್ಷದ ನಾಯಕರು ಎಲ್ಲಾ ತೀರ್ಮಾನ ಮಾಡಿದ್ದಾರೆ. ಕೆಲವು ಮೀಟಿಂಗ್ ಗೆ ನಾನು ಹೋಗಲು ಆಗಲಿಲ್ಲ. ನನ್ನದೇ ಕಾರಣದಿಂದ ಹೋಗಿಲ್ಲ. ಕಾಂಗ್ರೆಸ್ ಪಾರ್ಟಿ ಗೆಲ್ಲಬೇಕು ಅಷ್ಟೇ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Advertisement

ಉಪ ಚುನಾವಣೆಗೆ ಉಸ್ತುವಾರಿ ವಹಿಸಿಕೊಳ್ಳದ ಸೈಲೆಂಟ್ ಆದ ವಿಚಾರದಲ್ಲಿ ಮಾತನಾಡಿದ ಡಿಕೆಶಿ,  ಮಾಧ್ಯಮಗಳು ಸೈಲೆಂಟ್ ಆದ್ರೆ ನಾನು ಸೈಲೆಂಟ್ ಆಗಿರುತ್ತೇನೆ. ಕಾಂಗ್ರೆಸ್ ಪಕ್ಷ ಏನ್ ಹೇಳುತ್ತೋ ನಾನು ಅದನ್ನ ಮಾಡ್ತೀನಿ. ಕಾಂಗ್ರೆಸ್ ನಾಯಕರಿಗೂ ನನ್ನ‌ ಪರಿಸ್ಥಿತಿ ಗೊತ್ತಿದೆ. ಹಾಗಾಗಿ ಅವರು ಎಲ್ಲವನ್ನೂ ಮಾಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನಾಗಿ ಏನೆಲ್ಲ ಸಾಧ್ಯವೋ ಶಕ್ತಿ ಮೀರಿ ಮಾಡುತ್ತೇನೆ. ನನ್ನ ಪರಿಸ್ಥಿತಿ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.

ಬೆಳಗಾವಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದರು ಎಂದು ರಮೇಶ್ ಜಾರಕಿಹೋಳಿ ಮಾಡಿರುವ ಆರೋಪ ವಿಚಾರವಾಗಿ ಮಾತನಾಡಿದ ಡಿಕೆಶಿ, ಅವರೆಲ್ಲ ದೊಡ್ಡವರು, ಅವರ ಸುದ್ದಿ ನನಗೆ ಬೇಡ. ಅವರೆಲ್ಲ ದೊಡ್ಡ ಜನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next