Advertisement

ಔಷಧಿ ಕಂಡು ಹಿಡಿಯುತ್ತಿದ್ದೇವೆ… : ಸಚಿವ ಡಿ.ಕೆ.ಶಿವಕುಮಾರ್‌

10:09 AM Jul 08, 2019 | Vishnu Das |

ಬೆಂಗಳೂರು : ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 13 ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರ ಉಳಿಸಿಕೊಳ್ಳುವ ರಣತಂತ್ರಗಳನ್ನು ಆರಂಭಿಸಿದ್ದು, ಎಲ್ಲದಕ್ಕೂ ಔಷಧ, ಪರಿಹಾರಕಂಡುಕೊಳ್ಳುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ, ಎಲ್ಲದಕ್ಕೂ ಔಷಧ, ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಪರಿಹಾರ ಏನು ಎಂದು ಯಾರಾದರೂ ಹೇಳುತ್ತಾರಾ ? ಎಲ್ಲವೂ ನಿರಾಳ ಆಗುವ ವಿಶ್ವಾಸ ನಮ್ಮದು ಎಂದರು.

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಿದೆ
ಬಿಜೆಪಿಯವರು ಎಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಯಾರ ಮನೆಯಲ್ಲಿ ಸಭೆಗಳು ನಡೆಯುತ್ತಿವೆ ಎನ್ನುವುದೂ ಗೊತ್ತಿದೆ. ನಾವು ಸರ್ಕಾರ ರಚಿಸುವುದಿಲ್ಲ ಎನ್ನುತ್ತಿದ್ದರು , ಈಗ ಎಲ್ಲದಕ್ಕೂ ಸಿದ್ಧ ಎನ್ನುತ್ತಿದ್ದಾರೆ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ರಾಜೀನಾಮೆ ವಾಪಾಸ್‌ ಪಡೆಯುವ ಬೇಡಿಕೆಯನ್ನು ರಾಜೀನಾಮೆ ನೀಡಿದ ಶಾಸಕರು ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ ಎಂದು ಪ್ರಶ್ನಿಸಿದಾಗ , 5 ವರ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಎಂದಿದ್ದೇವೆ.
ಪಕ್ಷ ಮುಂದಿನದ್ದನ್ನು ತೀರ್ಮಾನಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next