Advertisement

ಡಿಕೆಶಿ ಕಸ್ಟಡಿ ಇಂದಿಗೆ ಅಂತ್ಯ: ಟ್ರಬಲ್‌ ಶೂಟರ್‌ ಗೆ ಸಿಗಬಹುದೇ ಜಾಮೀನು?

09:34 AM Sep 14, 2019 | keerthan |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಶದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರ ಇಡಿ ಕಸ್ಟಡಿ ಇಂದಿಗೆ ಅಂತ್ಯಗೊಳ್ಳಲಿದೆ.

Advertisement

ಇಂದು ಮಧ್ಯಾಹ್ನ 2 ಗಂಟೆಗೆ ಇ.ಡಿ ಅಧಿಕಾರಿಗಳು ಡಿ ಕೆ ಶಿವಕುಮಾರ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಇನ್ನೂ ಹಲವು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.

ಡಿ ಕೆ ಶಿವಕುಮಾರ್‌ ಅವರ ಪರ ವಕೀಲರು ಪಿಎಲ್‌ ಎ ವಿಶೇಷ ಕೋರ್ಟ್‌ ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದು ಕೂಡಾ ಇಂದೇ ವಿಚಾರಣೆಗೆ ಬರಲಿದೆ.  ಒಂದು ವೇಳೆ ಕೋರ್ಟ್‌ ಡಿಕೆಶಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದರೆ ಡಿಕಿಶಿ ತಿಹಾರ್‌ ಜೈಲು ಸೇರಲಿದ್ದಾರೆ.

ಗುರುವಾರ ರಾತ್ರಿ ಡಿ ಕೆ ಶಿವಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಲೋಹಿಯಾ ಅಸ್ಪತ್ರೆಗೆ ದಾಖಲಾಗಿದ್ದರು.

ಡಿ ಕೆ ಶಿವಕುಮಾರ್‌ ಅವರ ಮಗಳು ಐಶ್ವರ್ಯ ಗುರುವಾರ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. ಗ್ಲೋಬಲ್‌ ಕಾಲೇಜು ಟ್ರಸ್ಟಿ ಆಗಿರುವ ಐಶ್ವರ್ಯ ಇಡಿ ವಿಚಾರಣೆ ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next