Advertisement

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆ ಬೇಡ: ಸೈರಸ್‌ ಮಿಸ್ತ್ರಿ

10:14 AM Jan 07, 2020 | Team Udayavani |

ಮುಂಬಯಿ: ಟಾಟಾ ಸನ್ಸ್‌ ಸಂಸ್ಥೆಯಿಂದ ಉಚ್ಚಾಟನೆಗೊಂಡಿರುವ ಆ ಕಂಪೆನಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೈರಸ್‌ ಮಿಸ್ತ್ರಿ, ತಮಗೆ ಆ ಸ್ಥಾನವನ್ನು ಹೊಂದುವ ಯಾವುದೇ ಇರಾದೆ ಇಲ್ಲ. ಕಂಪೆನಿಯ ಹಿತಾಸಕ್ತಿಯನ್ನು ಮನಗಂಡು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪ್ರಕಟಿಸಿದ್ದಾರೆ.

Advertisement

ಇತ್ತೀಚೆಗೆ ಈ ಪ್ರಕರಣದ ತೀರ್ಪು ನೀಡಿದ್ದ ರಾಷ್ಟ್ರೀಯ ಕಂಪೆನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಎಟಿ), ಮಿಸ್ತ್ರಿಯವರನ್ನು ಟಾಟಾ ಸನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಸ್ಥಾನಕ್ಕೆ ಮರು ನೇಮಿಸಿ ಆದೇಶಿಸಿತ್ತು. ಇದನ್ನು ಟಾಟಾ ಸನ್ಸ್‌ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಇದರ ವಿಚಾರಣೆ ಸೋಮವಾರದಿಂದ ಆರಂಭವಾಗುವ ಸಾಧ್ಯತೆಗಳಿವೆ. ಅದರ ಮುನ್ನಾ ದಿನ ಮಿಸ್ತ್ರಿ ಪ್ರಕಟನೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next