Advertisement

ಆನೇಕಲ್: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು 7 ಜನರಿಗೆ ಗಾಯ

04:41 PM Nov 06, 2021 | Team Udayavani |

ಆನೇಕಲ್: ತಾಲೂಕಿನ ಜಿಗಣಿ ಯಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿರುವ ಅವಘಡ ಶನಿವಾರ ಬೆಳಗ್ಗೆ ನಡೆದಿದೆ.

Advertisement

ಗಾಯಾಳುಗಳು ಕಾರ್ಮಿಕರಾದ ಜಗದೀಶ್, ಶಾಂತಿಬೈ, ಪ್ರಕಾಶ್, ಕಾಡು,ಜೈಮುಲ್, ಮಂಜು,ವಲ್ಲಿ ಎಂದು ತಿಳಿದು ಬಂದಿದೆ.

ಜಿಗಣಿ ಪೊಲೀಸ್ ಠಾಣೆ ಹಿಂಭಾಗದ ಬಾಡಿಗೆ ಮನೆಯಲ್ಲಿ 15 ಕೆಜಿ ಸಿಲಿಂಡರ್ ಲಿಕೇಜ್ ಆಗಿದ್ದು, ಬೆಳಿಗ್ಗೆ ಮನೆಯಲ್ಲಿ ಗ್ಯಾಸ್ ತುಂಬಿ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ರಭಸಕ್ಕೆ ಮನೆಯ ಗೋಡೆಗಳು ದ್ವಂಸಗೊಂಡಿದ್ದು, ಬಿಲ್ಡಿಂಗ್ ನಲ್ಲಿದ್ದ 6 ಮನೆಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಅಕ್ಕಪಕ್ಕದ ಬಿಲ್ಡಿಂಗ್ ಗಳಿಗೂ ಹಾನಿಯಾಗಿದೆ. ಸ್ಪೋಟದ ಬಳಿಕ ಮನೆ ಹೊತ್ತಿ ಉರಿದಿದೆ. ಸ್ಪೋಟದ ಬಳಿಕ ಅಕ್ಕಪಕ್ಕದ ನಿವಾಸಿಗಳು ಆತಂಕ ಗೊಂಡಿದ್ದರು.

ಕಂಬಳಿ ಹಾಗೂ ಬ್ಯಾಗ್ ವ್ಯಾಪಾರ ಮಾಡುತ್ತಿದ್ದ ಉತ್ತರ ಭಾರತ ಮೂಲದ ದಂಪತಿ ಮನೆಗೆ ಕಳೆದ ರಾತ್ರಿ ದೀಪಾವಳಿ ಹಿನ್ನೆಲೆ ಮನೆಗೆ ಐದು ಜನ ಸ್ನೇಹಿತರು ಮನೆಗೆ ಆಗಮಿಸಿದ್ದರು.

. ಗಾಯಗೊಂಡವರಿಗೆ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಮಂಜುನಾಥ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಎರಡು ವರ್ಷದಿಂದ ಬಾಡಿಗೆ ಮನೆಯಲ್ಲಿ ಕಾರ್ಮಿಕರು ವಾಸವಿದ್ದರು.

ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next