Advertisement

ಬಾಂಗ್ಲಾ ಕಡೆಗೆ ಸಾಗುತ್ತಿರುವ ಫೋನಿ; ಪಶ್ಚಿಮ ಬಂಗಾಲದಲ್ಲಿ ದೊಡ್ಡ ಪರಿಣಾಮ ಇಲ್ಲ

09:59 AM May 05, 2019 | Sathish malya |

ಕೋಲ್ಕತ : ಪ್ರಳಯಾಂತಕಾರಿ ಫೋನಿ ಚಂಡಮಾರುತ ಪಶ್ಚಿಮ ಬಂಗಾಲವನ್ನು ಪ್ರವೇಶಿಸುತ್ತಿದ್ದಂತೆಯೇ ಇಂದು ಶನಿವಾರ ದುರ್ಬಲಗೊಂಡ ಕಾರಣ ಪಶ್ಚಿಮ ಬಂಗಾಲದ ಜನರು ಜೀವ ಭಯದಿಂದ ಮುಕ್ತರಾಗಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಯಿತು.

Advertisement

ದುರ್ಬಲ ಫೋನಿ ಚಂಡಮಾರುತ ಇದೀಗ ಇಲ್ಲಿಂದು ಮುಂದೆ ಬಾಂಗ್ಲಾದೇಶದ ಕಡೆಗೆ ಸಾಗುತ್ತಿರುವುದಾಗಿ ಪ್ರಾದೇಶಿಕ ಹವಾಮಾನ ಕೇಂದ್ರ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತ ನಗರದ ಜನರು ಇಂದು ಫೋನಿ ಚಂಡಮಾರುತದ ಪರಿಣಾಮ ಗಂಟೆಗೆ 30 ರಿಂದ 40 ಕಿ.ಮೀ. ವೇಗದಿಂದ ಬೀಸಿ ಬಂದ ಬಿರುಗಾಳಿಯನ್ನು ಅನುಭವಿಸಿದರು. ಇದರ ಜತೆಗೆ ನಿನ್ನೆ ಮಧ್ಯ ರಾತ್ರಿಯಿಂದಲೇ ನಗರದಲ್ಲಿ ಜಡಿ ಮಳೆಯಾಗತೊಡಗಿತು.

ದುರ್ಬಲಗೊಂಡು ಸಾಗುತ್ತಿರುವ ಫೋನಿ ಚಂಡಮಾರುತದಿಂದ ಪಶ್ಚಿಮ ಬಂಗಾಲದಲ್ಲಿ ಯಾವುದೇ ಸಾವು ನೋವು, ನಾಶ ನಷ್ಟ ಉಂಟಾದ ವರದಿಗಳು ಈ ವರೆಗೆ ಬಂದಿಲ್ಲ. ಫೋನಿ ತನ್ನ ಪ್ರತಾಪವನ್ನು ತೋರಿಸದೆಯೇ ನಗರದ ಮೂಲಕ ಹಾದು ಹೋಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next