Advertisement

ಭ್ರಷ್ಟ ಅಧಿಕಾರಿಗಳ ಪತ್ತೆಗೆ ಆಧಾರ್‌ ಬಳಕೆ

06:59 AM Apr 02, 2018 | |

ಹೊಸದಿಲ್ಲಿ: ಹಲವು ಹಣಕಾಸು ವಹಿವಾಟುಗಳು,  ಸ್ವತ್ತುಗಳ ಖರೀದಿಗೆ ಆಧಾರ್‌ ಸಂಖ್ಯೆ ಭ್ರಷ್ಟಾಚಾರವನ್ನು ಕಂಡುಹಿಡಿಯುವುದು ಸುಲಭವಾಗಿದೆ ಎಂದು ಕೇಂದ್ರೀಯ ವಿಚಕ್ಷಣ ಆಯೋಗ ಹೇಳಿದೆ.

Advertisement

 ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ನಲ್ಲಿ ದಾಖಲಾಗಿರುವ ಹಣಕಾಸು ವಹಿವಾಟುಗಳ ಮೂಲಕ ವಿಚಕ್ಷಣ ದಳವು ಅಧಿಕಾರಿಯ ಆರ್ಥಿಕ ವ್ಯವಹಾರದ ಮೇಲೆ ನಿಗಾ ಇಡಬಹುದು. ಇದಕ್ಕಾಗಿ  ನಾವು ಒಂದು ಯೋಜನೆ ರೂಪಿಸಿದ್ದೇವೆ. ಅದರ ಪ್ರಕಾರ, ಸಾಫ್ಟ್ವೇರ್‌ ಅಥವಾ ನೀತಿಯನ್ನು ರೂಪಿಸಿ, ಇದರ ಮೂಲಕ ಅಧಿಕಾರಿಗಳ ವಹಿವಾಟುಗಳ ಮೇಲೆ ನಿಗಾ ಇಡಲಾಗುತ್ತದೆ ಎಂದು ವಿಚಕ್ಷಣಾ ಆಯೋಗದ ಮುಖ್ಯಸ್ಥ ಕೆ.ವಿ.ಚೌಧರಿ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ, ಹಣಕಾಸು ಗುಪ್ತಚರ ವಿಭಾಗ ಮತ್ತು ಇತರ ಸರಕಾರಿ ಸಂಸ್ಥೆಗಳಲ್ಲಿ ಇರುವ ಸ್ಥಿರಾಸ್ತಿ ಮತ್ತು ಷೇರುಗಳ ವಿವರಗಳು ಆಧಾರ್‌ನಿಂದಾಗಿ ಒಟ್ಟಿಗೆ ಸಿಗುವಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next