Advertisement

ಕರಾವಳಿ ರೈತರಿಗೆ ಸಾಗುವಳಿ ಚೀಟಿ: ಅಶೋಕ್‌ ಕುಮಾರ್‌ ರೈ ಆಗ್ರಹ

11:02 PM Feb 19, 2024 | Team Udayavani |

ಬೆಂಗಳೂರು: ಸರಕಾರಿ ಜಾಗದ ಪಕ್ಕದ ಕುಮ್ಕಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಅಕ್ರಮ-ಸಕ್ರಮ ಅನ್ವಯಿಸಿ, ಸಾಗುವಳಿ ಚೀಟಿ ನೀಡಬೇಕೆಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಆಗ್ರಹಿಸಿದರು.

Advertisement

ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾವಿಸಿದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಹಳ ರೈತರು ಈ ರೀತಿ ಸಾಗುವಳಿ ಮಾಡುತ್ತಿದ್ದು, ಕುಮ್ಕಿ ಜಮೀನಿನ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿದೆ. ಇದನ್ನೇ ನೆಪ ಮಾಡಿಕೊಂಡು ಅಕ್ರಮ-ಸಕ್ರಮ ಕಡತಗಳು ಬಾಕಿ ಉಳಿಯುತ್ತಿವೆ. ಪಹಣಿಯಲ್ಲಿ ಸರಕಾರಿ ಜಾಗ ಎಂದು ಇರುತ್ತದೆಯೇ ಹೊರತು ಕುಮ್ಕಿ ಎಂದು ಇರುವುದಿಲ್ಲ. ಇಂತಹ ಜಾಗಗಳಿಗೆ ಸಾಗುವಳಿ ಚೀಟಿ ಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿಯ ಶಿವರಾಂ ಹೆಬ್ಬಾರ್‌ ಕೂಡ ಧ್ವನಿಗೂಡಿಸಿದರು.

ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next