Advertisement

ಗೋಮಾಂಸ ತಿನ್ನುವವರು ಹೆಚ್ಚು ಕಾಲ ಉಳಿಯೋಕೆ ಸಾಧ್ಯವಿಲ್ಲ!

01:18 PM Oct 08, 2017 | Team Udayavani |

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರೂ ಗೋಹತ್ಯೆಗೆ ಬೆಂಬಲ ನೀಡಿದ್ದರು..ಅಲ್ಲ ವಿರೋಧಿಸಿದ್ದರು… ಇದು ಬಿಜೆಪಿ ಶಾಸಕ, ಮಾಜಿ ಸಚಿವ ಸಿ.ಟಿ.ರವಿ ಅವರು ಮಾಡಿದ ವಿವಾದಾತ್ಮಕ ಭಾಷಣ.

Advertisement

ಬಿಜೆಪಿ ಮೌರ್ಯ ಸರ್ಕಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಸಾಯಿಖಾನೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ರವಿ ಅವರು ಕೆಲ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ. 

‘ಇವತ್ತು ಯಾರು ಆಸ್ಪತ್ರೆಯ ಮುಂದೆ ಹೆಚ್ಚು ಕ್ಯೂ ನಿಲ್ಲುತ್ತಿದ್ದಾರೆ ಗೊತ್ತೆ, ಗೋಮಾಂಸ ತಿನ್ನುವವರು. ನೀವು ಪರೀಕ್ಷೆ ಮಾಡಿ, ನಾನೇನು ಇದನ್ನು ಸುಮ್ನೆ ಹೇಳ್ತಾ ಇಲ್ಲ. ಆಸ್ಪತ್ರೆಗೆ ಬರುವವರಲ್ಲಿ ಗೋಮಾಂಸ ತಿನ್ನುವವರು ಜಾಸ್ತಿ. ಗೋಮಾಂಸ ತಿನ್ನುವವರು ಪಾಪದ ಫ‌ಲ ಅನುಭವಿಸಲೇಬೇಕು. ಕೇವಲ ಬಾಯಿ ಚಪಲಕ್ಕೆ ಗೋಮಾಂಸ ತಿನ್ನುವವರು ಹೆಚ್ಚು ಕಾಲ ಉಳಿಯೋಕೆ ಸಾಧ್ಯವಿಲ್ಲ. 30 ವರ್ಷಕ್ಕೇ ಕಾಯಿಲೆಗೆ ತುತ್ತಾಗುತ್ತಾರೆ. ಗೋಮಾಂಸ ತಿನ್ನಬೇಡಿ ಬದಲಾಗಿ ಗೋಸಂರಕ್ಷಣಾ ಅಭಿಯಾನಕ್ಕೆ ಬೆಂಬಲ ನೀಡಿ’ ಎಂದರು. 

ಭಾಷಣದ ಭರದಲ್ಲಿ ಬಾಯ್ತಪ್ಪಿ ‘ಅಂಬೇಡ್ಕರ್‌ ಅವರೂ ಗೋಹತ್ಯೆಗೆ ಬೆಂಬಲ ನೀಡಿದ್ದರು’ ಎಂದು ಬಳಿಕ ಸರಿಪಡಿಸಿ ‘ವಿರೋಧಿಸಿದ್ದರು’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next