Advertisement

ಲಿಂಗಾಯತರ ವಿರುದ್ದ ಸಿ.ಟಿ.ರವಿ ಹೇಳಿಕೆ ಪೋಸ್ಟ್ ಪ್ರಕರಣ: ಮೂವರ ವಿರುದ್ದ ಎಫ್.ಐ.ಆರ್

05:36 PM Apr 04, 2023 | Team Udayavani |

ಚಿಕ್ಕಮಗಳೂರು: ಲಿಂಗಾಯತ ಸಮುದಾಯದ ವಿರುದ್ದ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ಪೋಸ್ಟ್ ಪ್ರಕರಣದಲ್ಲಿ ಮೂವರ ವಿರುದ್ದ ಎಫ್.ಐ.ಆರ್ ದಾಖಲು ಮಾಡಲಾಗಿದೆ.

Advertisement

ದಾವಣಗೆರೆಯ ಹರೀಶ್, ಗುರುಪಾಟೀಲ್, ತುಮಕೂರಿನ ಸುವರ್ಣಗಿರಿ ವಿರುದ್ದ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರದ ಪತ್ರಾ ಚಾಲ್ ಹಗರಣ: ಗೋವಾದಲ್ಲಿ 31.50 ಕೋಟಿ ಮೌಲ್ಯದ ಆಸ್ತಿ ವಶ

ಲಿಂಗಾಯಿತ ಮತಗಳು ಪ್ರಾಮುಖ್ಯತೆ ಅಲ್ಲ ಎನ್ನುವ ಎಂದು ಸಿ.ಟಿ.ರವಿ ಅವರನ್ನು ಉಲ್ಲೇಖಿಸಿದ್ದ ಪೋಸ್ಟ್ ವೈರಲ್ ಆಗಿತ್ತು. ರಾಜ್ಯ ರಾಜಕಾರಣದಲ್ಲಿ ಇದು ಸಾಕಷ್ಟು ಸಂಚಲನ ಉಂಟು ಮಾಡಿತ್ತು. ತನಿಖೆ ನಡೆಸುವಂತೆ ಎಸ್ಪಿಗೆ ದೂರು ನೀಡಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರಡಪ್ಪ ದೂರಿನಡಿಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next