Advertisement

ರಾಣಿ ಚೆನ್ನಮ್ಮ‌ಮೈದಾನದಲ್ಲಿ ಏನು‌ ಮಾಡಿದರು?: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

01:34 PM Feb 17, 2022 | Team Udayavani |

ಬೆಂಗಳೂರು: ರಾಷ್ಟ್ರ ಧ್ವಜ ತೆಗೆದು ಕೇಸರಿ ಹಾರಿಸುತ್ತೇವೆ ಅಂತ ಹೇಳಿಲ್ಲ, ರಾಷ್ಟ್ರಧ್ವಜಕ್ಕೆ ನಾವು ಗೌರವ ಕೊಟ್ಟೇ ಕೊಡುತ್ತೇವೆ ಎಂದು ಕಾಂಗ್ರೆಸ್ ಅಹೋರಾತ್ರಿ‌ ಧರಣಿ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಣಿ ಚೆನ್ನಮ್ಮ‌ಮೈದಾನದಲ್ಲಿ ಏನು‌ ಮಾಡಿದರು? 11 ಜನರನ್ನು ಗುಂಡು ಹಾರಿಸಿ ಕೊಂದರು. ಈಗ ರಾಷ್ಟ್ರಧ್ವಜದ ಬಗ್ಗೆ ಎಲ್ಲಿಲ್ಲದ ಪ್ರೀತಿ ಹುಟ್ಟಿದೆ. ಲಾಲ್ ಚೌಕದ ಮೇಲೆ ಪಾಕ್ ಧ್ವಜ ಹಾರಿಸಿ ಎಂದು ಒತ್ತಡ ಹಾಕಿದ್ದರು. ಉಗ್ರಗಾಮಿಗಳು‌ ಪಾಕ್ ಧ್ವಜ ಹಾರಿಸೋಕೆ ಒತ್ತಡ ಹಾಕಿದರು. ಅಲ್ಲಿ ನಾವು ರಾಷ್ಟ್ರಧ್ವಜ ಹಾರಿಸಿ ಬಂದವರು ಎಂದು ಕಿಡಿಕಾರಿದರು.

ಇದನ್ನೂ ಓದಿ:ಈಶ್ವರಪ್ಪ ಹೇಳಿಕೆ ಖಂಡಿಸಿ : ಯುವ ಕಾಂಗ್ರೆಸ್ಸಿಗರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ

ರಾಣಿಚೆನ್ನಮ್ಮ‌ಮೈದಾನದಲ್ಲಿ ಗುಂಡು ಹಾರಿಸಿದ್ದು ಹೇಗೆ? ಜೆಎಂಎಂ ಪ್ರಾಡಕ್ಟ್ ಗಳು ಇವರ ಜೊತೆ ಸೇರಿದ್ದಾರೆ. ಕನ್ಹಯ್ಯ ಸೇರಿ ಹಲವರು ಬಂದಿದ್ದಾರೆ. ಹಿಜಾಬ್ ಮರೆಮಾಚಲು ವಿಷಯಾಂತರ ಮಾಡುತ್ತಿದ್ದಾರೆ. ರಾಷ್ಟ್ರಧ್ವಜ ತೆಗೆದು ಹಾರಿಸುತ್ತೇವೆ ಅಂದರೆ ತಪ್ಪು. ರಾಷ್ಟ್ರಧ್ವಜದ ಕೆಳಗೆ ಹಾರಿತ್ತೇವೆ ಅಂದರೆ ತಪ್ಪಿಲ್ಲ. ರಾಷ್ಟ್ರಧ್ವಜಕ್ಕೆ ನಾವು ಗೌರವ ಕೊಡುತ್ತೇವೆ. ಅಖಂಡ ಭಾರತ ನಮ್ಮ ಆಶಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next