Advertisement

ಉದ್ಯಮಿ ವಿರುದ್ಧ ವಂಚನೆ ಕೇಸು ದಾಖಲಿಸಿದ ಹರ್ಭನ್‌ ಸಿಂಗ್‌

09:17 PM Sep 10, 2020 | mahesh |

ಚೆನ್ನೈ: ಭಾರತದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಚೆನ್ನೈ ಉದ್ಯಮಿ ಜಿ. ಮಹೇಶ್‌ ಎಂಬವರ ವಿರುದ್ಧ 4 ಕೋಟಿ ರೂ. ವಂಚನೆ ದೂರು ದಾಖಲಿಸಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ, ಉದ್ಯಮಿ ಮಹೇಶ್‌ ಮದ್ರಾಸ್‌ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಅನಂತರ ಈ ವಿಚಾರ ಬಯಲಾಗಿದೆ.

Advertisement

“ಇಬ್ಬರಿಗೂ ಸಮಾನ ಗೆಳೆಯನ ಮೂಲಕ ಮಹೇಶ್‌ ಪರಿಚಯವಾಗಿದ್ದಾರೆ. ಅವರಿಗೆ 4 ಕೋಟಿ ರೂ. ಸಾಲ ನೀಡಿದ್ದೇನೆ. ಮರುಪಾವತಿಗಾಗಿ ಅವರನ್ನು ಸಂಪರ್ಕಿಸಿದರೆ, ಭೇಟಿಯನ್ನೇ ತಪ್ಪಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಅವರು ನೀಡಿದ 25 ಲಕ್ಷ ರೂ. ಚೆಕ್‌ ಬೌನ್ಸ್‌ ಆಗಿತ್ತು’ ಎಂದು ಹರ್ಭಜನ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಮಹೇಶ್‌ಗೆ ತನಿಖೆಗೆ ಹಾಜರಾಗಲು ಸಮನ್ಸ್‌ ಬಂದಿದೆ. ಅವರೀಗ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ. ತಾನು ಭಜ್ಜಿಯಿಂದ ಸಾಲ ಪಡೆಯುವ ಮುನ್ನ ಸ್ಥಿರಾಸ್ತಿಯೊಂದನ್ನು ಭದ್ರತೆಯಾಗಿ ನೀಡಿದ್ದೇನೆಂದು ಮಹೇಶ್‌ ಸಮರ್ಥಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next