Advertisement

ಅಣ್ಣೂರುಕೇರಿಯ ಸಿಆರ್ ಪಿಎಫ್ ಯೋಧ ದೆಹಲಿಯಲ್ಲಿ ಸಾವು

02:06 PM Jul 02, 2021 | Team Udayavani |

ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಅಣ್ಣೂರುಕೇರಿ ಗ್ರಾಮದವರಾದ ಸಿಆರ್ ಪಿ ಎಫ್ ಯೋಧ ಶಿವಕುಮಾರ್ (35 ವ) ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕುಸಿದು ಬಿದ್ದು ಶುಕ್ರವಾರ ಮೃತಪಟ್ಟಿದ್ದಾರೆ.

Advertisement

ಯೋಧ ಶಿವಕುಮಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಕರ್ತವ್ಯಕ್ಕೆ ರಜೆ ಹಾಕಿ ಗುರುವಾರ ತಡ ರಾತ್ರಿ ಊರಿಗೆ ಪ್ರಯಾಣ ಬೆಳೆಸಲು ದೆಹಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಶುಕ್ರವಾರ ಬೆಳಗಿನ ಜಾವ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:ಮದುವೆಯಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ರಸ್ತೆ ಅಪಘಾತ: ವಧು ಸಾವು, ವರನಿಗೆ ಗಂಭೀರ ಗಾಯ

ಬೆಂಗಳೂರಿನ ಸಿಆರ್ ಪಿಎಫ್ ಯೋಧರ ತಂಡ ಪಾರ್ಥಿವ ಶರೀರವನ್ನು ಇಂದು ರಾತ್ರಿ ಅಥವಾ ನಾಳೆ ಯೋಧ ಶಿವಕುಮಾರ್ ಸ್ವಗ್ರಾಮ ಅಣ್ಣೂರುಕೇರಿಗೆ ತರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next