Advertisement

ತಾಲೂಕು ಕಚೇರಿಯಲ್ಲಿ  ಅರ್ಜಿ ಸಲ್ಲಿಕೆಗಾಗಿ ಜನಸಂದಣಿ

01:00 AM Mar 13, 2019 | Team Udayavani |

ಕಾರ್ಕಳ: ಆರ್‌ಟಿಸಿ ಪಡೆಯಲು ಮತ್ತು 57 ಸಿ ಅರ್ಜಿ ಸಲ್ಲಿಕೆಗಾಗಿ ಫ‌ಲಾನುಭವಿಗಳು ತಾಲೂಕು ಕಚೇರಿಯತ್ತ ಧಾವಿಸಿದ್ದು, ಪರಿಣಾಮ ತಾಲೂಕು ಕಚೇರಿಯಲ್ಲಿ ಜನಸಂದಣಿಯೇ ಕಂಡುಬರುತ್ತಿದೆ. ಹೀಗಾಗಿ ಜನತೆ ತಮ್ಮ ಕಾರ್ಯವಾಗದೇ ತಾಲೂಕು ಕಚೇರಿಯಲ್ಲೇ ಕಾಲ ಕಳೆಯುವಂತಾಗಿದೆ.

Advertisement

ಚುನಾವಣೆ ದಿನಾಂಕ ಘೊಷಣೆಯಾದ ಹಿನ್ನೆಲೆಯಲ್ಲಿ ಮಾ. 16ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದಾಗ್ಯೂ ನೀತಿ ಸಂಹಿತೆಯಿಂದ ಆತಂಕದಿಂದ  ಫ‌ಲಾನುಭವಿಗಳು ಅರ್ಜಿ ಸಲ್ಲಿಕೆಗಾಗಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ. ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗಾಗಿ ಕಾಯುವಂತಾದರೆ, ಆರ್‌ಟಿಸಿ ಕೇಂದ್ರದಲ್ಲಿ ಪಹಣಿ ಪತ್ರ ಪಡೆಯಲು ಸಾಲುಗಟ್ಟಿ ನಿಲ್ಲುವುದು ಅನಿವಾರ್ಯವಾಗಿದೆ.

ಗ್ರಾ.ಪಂ.ನಲ್ಲಿ ಪಹಣಿ ಪತ್ರ ಲಭ್ಯವಿಲ್ಲದ ಕಾರಣ ತಾಲೂಕಿನ ಒತ್ತಡ ತಾಲೂಕು ಕಚೇರಿಗೆ ಬಿದ್ದಿದೆ. ಅಜೆಕಾರು ಹೋಬಳಿ ಹೊರತು ಪಡಿಸಿ ಇಡೀ ತಾಲೂಕಿನ ಜನ ಕಂದಾಯ ಸೇವೆಗಾಗಿ ತಾಲೂಕು ಕಚೇರಿಯನ್ನೇ ಅವಲಂಬಿಸಿದ್ದು, ಇದರಿಂದಾಗಿ ತಾಲೂಕು ಕಚೇರಿಯಲ್ಲಿ ಜನಸಂದಣಿ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next