Advertisement

ಭಟ್ಕಳಕ್ಕೆ ಕೋಟಿ ರೂ. ಬಿಡುಗಡೆ

05:55 PM Mar 28, 2020 | Suhan S |

ಕಾರವಾರ: ಕೋವಿಡ್ 19 ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಭಟ್ಕಳ ತಾಲೂಕಿನ ಸಹಾಯಕ ಕಮಿಷನರ್‌ ಅವರಿಗೆ ಕೋಟಿ ರೂ. ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Advertisement

ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲಾಗಿದ್ದು, ಸಹಾಯಕ ಕಮಿಷನರ್‌ ಅವರು ವಿವೇಚನೆ ಬಳಿಸಿ, ಕೋವಿಡ್‌ -19 ತಡೆಗೆ ಮಾತ್ರ ಈ ಅನುದಾನ ಬಳಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಭಟ್ಕಳ ತಾಲೂಕಿನ ಭಟ್ಕಳ ಪುರಸಭೆ ಹಾಗೂ ಜಾಲಿ ಪಪಂ ವ್ಯಾಪ್ತಿಯ 3 ಕಿ.ಮೀ. ಸುತ್ತಮುತ್ತ ಕೋವಿಡ್ 19 ತಡೆಗೆ ಕ್ರಮಕೈಗೊಳ್ಳಬೇಕಿದ್ದು, ಕೋಟಿ ರೂ. ಹಣ ಬಳಸಬಹುದಾಗಿದೆ. ಕೋವಿಡ್ 19 ಸೋಂಕಿತರು ಇರುವ ಪ್ರದೇಶ ಎಂದು ಭಟ್ಕಳದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಈಗಾಗಲೇ ಘೋಷಿಸಲಾಗಿದೆ. ಇಲ್ಲಿ ಬಳಸಿದ ಹಣದ ಲೆಕ್ಕ ಇಡಬೇಕು. ಎಲ್ಲ ಖರ್ಚುವೆಚ್ಚಕ್ಕೆ ಸಹಾಯಕ ಕಮಿಷನರ್‌ ಬಾಧ್ಯಸ್ಥರಾಗಿರುತ್ತಾರೆಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next