Advertisement

ಕೊಡಗಿನ 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ

11:52 PM Aug 17, 2019 | sudhir |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ನೆಲಕಚ್ಚಿದ್ದು, ರೈತರು ಸಂಕಷ್ಟು ಅನುಭವಿಸುವಂತಾಗಿದೆ. ಮತ್ತೂಂದೆಡೆ ವಿವಿಧ ಮೂಲ ಸೌಲಭ್ಯಗಳ ಹಾನಿ, ಮನೆ ಕುಸಿತ ಮುಂತಾದವುಗಳಿಂದಲೂ ಅಪಾರ ಪ್ರಮಾಣ ಹಾನಿ ಸಂಭವಿಸಿದ್ದು, ಪ್ರಾಥಮಿಕ ವರದಿಯಂತೆ ಸುಮಾರು 579 ಕೋಟಿ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.ಇದು ತುರ್ತಾಗಿ ನಡೆಸಿದ ಸಮೀಕ್ಷೆಯಾಗಿದ್ದು, ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Advertisement

ಬೆಳೆಹಾನಿ ವಿವರ

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ನಷ್ಟವಾಗಿದ್ದು ಕೃಷಿಕರಿಗೆ ಮಳೆ ಬರೆ ಎಳೆದಿದೆ. 3,623 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗಿ 4.52 ಕೋಟಿಯಷ್ಟು ನಷ್ಟವಾಗಿದೆ. 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ನಾಶವಾಗಿದ್ದು ಅಂದಾಜು 51.85 ಕೋಟಿ ನಷ್ಟವಾಗಿದೆ. 6,350 ಹೆಕ್ಟೇರ್‌ ಪ್ರದೇಶದಲ್ಲಿ ಕಾಳು ಮೆಣಸು ಬೆಳೆ ನೆಲಕಚ್ಚಿದ್ದು 66.65 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಿದೆ.

ಅದೇ ರೀತಿ 40 ಹೆಕ್ಟೇರ್‌ನಲ್ಲಿ ಜೋಳ, 1,579 ಹೆಕ್ಟೇರ್‌ನಲ್ಲಿ ಅಡಿಕೆ, 904 ಹೆಕ್ಟೇರ್‌ ಶುಂಠಿ, 2,241 ಹೆಕ್ಟೇರ್‌ನಲ್ಲಿ ಬಾಳೆ, 1,806 ಹೆಕ್ಟೇರ್‌ ಏಲಕ್ಕಿ, 380 ಹೆಕ್ಟೇರ್‌ನಲ್ಲಿ ವಿವಿಧ ತರಕಾರಿ ಬೆಳೆ, 18 ಹೆಕ್ಟೇರ್‌ನಲ್ಲಿ ಮಾಡಿದ್ದ ಮೀನುಗಾರಿಕೆ ಕೃಷಿಗೆ ಹಾನಿಯಾಗಿದ್ದು, ಅತಿವೃಷ್ಟಿಯಿಂದ ಒಟ್ಟು 1,18,975 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆÙ ಹಾನಿಗೀಡಾಗಿದ್ದು, ಒಟ್ಟು 266.52 ಕೋಟಿಯಷ್ಟು ಫ‌ಸಲು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಅತಿವೃಷ್ಟಿಯಿಂದ ಉಂಟಾದ ಪ್ರವಾಹದಿಂದ ರಸ್ತೆ, ಸರ್ಕಾರಿ ಕಟ್ಟಡ, ಕೆರೆ ಹಾಗೂ ಮೋರಿಗಳಿಗೂ ಹಾನಿಯಾಗಿದ್ದು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 81 ಕಾಮಗಾರಿ ಹಾನಿಯಾಗಿ 10023.45 ಲಕ್ಷ, ಗ್ರಾಮೀಣಾಭಿವೃದ್ಧಿ ಎಂಜಿನಿಯರಿಂಗ್‌ ವಿಭಾಗದ 786 ಕಾಮಗಾರಿಗೆ 9578ಲಕ್ಷ, 75 ಅಂಗನವಾಡಿ ಕಟ್ಟಡ ಹಾನಿಗೆ 150ಲಕ್ಷ, 168 ಶಾಲಾ ಕಟ್ಟಡ ಹಾನಿಗೆ 252ಲಕ್ಷ, 14 ಆಸ್ಪತ್ರೆ ಕಟ್ಟಡಗಳಿಗೆ ಹಾನಿಯಾಗಿ 21ಲಕ್ಷ, ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ 131 ಕಾಮಗಾರಿಗೆ 300ಲಕ್ಷ ಸಣ್ಣ ನೀರಾವರಿ ಇಲಾಖೆ 27 ಕಾಮಗಾರಿಗೆ 675ಲಕ್ಷ, ಸೆಸ್ಕ್ನ 1,467 ಕಾಮಗಾರಿಗೆ ಹಾನಿಯಾಗಿ 61.31 ಲಕ್ಷ, ನಗರಾಭಿವೃದ್ಧಿ ಇಲಾಖೆಯ 223 ಕಾಮಗಾರಿಗೆ 3305.50ಲಕ್ಷ, ಪಿಎಂಜಿಎಸ್‌ವೈನ 15 ಕಾಮಗಾರಿಗೆ 557.30ಲಕ್ಷ, ರಾಷ್ಟ್ರೀಯ ಹೆದ್ದಾರಿಯಲ್ಲಿ 32 ಸ್ಥಳಗಳಲ್ಲಿ ಭೂಕುಸಿತ ಮತ್ತಿತರ ಕಾಮಗಾರಿ ಹಾನಿಯಾಗಿ 5884 ಲಕ್ಷ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1 ಕಾಮಗಾರಿಗೆ ಹಾನಿಯಾಗಿ 4.20ಲಕ್ಷ ರೂ.ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ. ಒಟ್ಟಾರೆಯಾಗಿ ವಿವಿಧ ಇಲಾಖೆಗಳ 3,020 ಕಾಮಗಾರಿಗಳಿಗೆ ಹಾನಿಯಾಗಿದ್ದು, 305.91 ಕೋಟಿಯಷ್ಟು ನಷ್ಟವಾಗಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next