Advertisement

ರಾಜಸ್ಥಾನ : ಚಂಬಲ್‌ ನದೀ ದಡದಲ್ಲಿ ನಿಂತಿದ್ದ ವ್ಯಕ್ತಿ ಮೊಸಳೆಗೆ ಬಲಿ

12:32 PM Jan 10, 2019 | udayavani editorial |

ಜೈಪುರ : ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿನ ಚಂಬಲ್‌ ನದೀ ದಡದಲ್ಲಿ ನಿಂತಿದ್ದ 30ರ ಹರೆಯದ ವ್ಯಕ್ತಿಯನ್ನು  ಮೊಸಳೆಯೊಂದು ಛಂಗನೆ ದಡದೆಡೆಗೆ ಹಾರಿ ತಿಂದು ಹಾಕಿರುವ ಘಟನೆ ವರದಿಯಾಗಿದೆ. 

Advertisement

ನಿನ್ನೆ ಬುಧವಾರ ರಾತ್ರಿ ನಡೆದಿರುವ ಈ ಘಟನೆಯಲ್ಲಿ ಮೊಸಳೆಗೆ ಬಲಿಯಾದ ವ್ಯಕ್ತಿಯನ್ನು ಮುಕೇಶ್‌ ಮಲ್ಲಾಹ್‌ ಎಂದು ಗುರುತಿಸಲಾಗಿದೆ.

ಮೊಸಳೆ ತಿಂದುಳಿದ ವ್ಯಕ್ತಿಯ ಅರೆಬರೆ ಶವನ್ನು ಮುಳುಗುಗಾರರು ಇಂದು ಗುರುವಾರ ಪತ್ತೆ ಮಾಡಿದರು ಎಂದು ಮಂದ್ರಾಯಲ ಪೊಲೀಸ್‌ ಠಾಣೆಯ ಎಸ್‌ಎಚ್‌ಓ ರಘುವೀರ್‌ ಸಿಂಗ್‌ ತಿಳಿಸಿದ್ದಾರೆ. 

ಮರಣೋತ್ತರ ಪರೀಕ್ಷೆ ಬಳಿಕ ವ್ಯಕ್ತಿಯ ಶವವನ್ನು ಆತನ ಮನೆಯವರಿಗೆ ಬಿಟ್ಟುಕೊಡಲಾಗಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next