Advertisement

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

01:15 AM Jun 24, 2024 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿನ ಕುರಿತಾಗಿ ಹನುಮಾನ್‌ಗಢಿ ದೇಗುಲದ ಪ್ರಧಾನ ಅರ್ಚಕ ಮಹಾಂತ ರಾಜ್‌ ದಾಸ್‌ ಮತ್ತು ಜಿಲ್ಲಾಧಿಕಾರಿ (ಡಿಎಂ) ನಿತೀಶ್‌ ಕುಮಾರ್‌ ನಡುವೆ ವಾಗ್ವಾದ ನಡೆದಿದೆ. ಈ ಕಾರಣಕ್ಕಾಗಿ ಅರ್ಚಕರಿಗೆ ನೀಡಿದ್ದ ಭದ್ರತೆಯನ್ನೇ ಆಡಳಿ ತಾಧಿಕಾರಿಗಳು ಹಿಂಪಡೆದಿರುವ ಆರೋಪ ಕೇಳಿ ಬಂದಿದೆ.

Advertisement

ಬಿಜೆಪಿ ಸೋತಿದ್ದಕ್ಕೆ ಕಾರಣವೇನೆಂದು ತಿಳಿ ಯಲು ಪಕ್ಷದ ಕೆಲವು ಪ್ರಮುಖರು, ಜಿಲ್ಲಾಧಿಕಾರಿಗಳು ಹಾಗೂ ಅರ್ಚಕ ದಾಸ್‌ ಅವರ ನಡುವೆ ಸಭೆ ನಡೆದಿದೆ. ಈ ವೇಳೆ ಪಕ್ಷದ ಸೋಲಿಗೆ ಕಾರ್ಯಕರ್ತರಷ್ಟೇ ಕಾರಣ ಅಲ್ಲ, ಜಿಲ್ಲಾಡಳಿತದ ಕ್ರಮಗಳೂ ಕಾರಣ ಎಂದು ದಾಸ್‌ ಆರೋಪಿಸಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ನಿತೀಶ್‌ ಕೋಪಗೊಂಡಿದ್ದಾರೆ.

ವಾಗ್ವಾದದ ಬಳಿಕ ದಾಸ್‌ ಸಭೆಯಿಂದ ಹೊರಬಂದು ನೋಡಿದರೆ, ಅವರ ಭದ್ರತೆಗೆಂದು ಒದಗಿಸಿದ್ದ ಗನ್‌ಮ್ಯಾನ್‌ ಮಾಯವಾಗಿದ್ದರು. ತಮ್ಮ ಮೇಲಿನ ಕೋಪಕ್ಕೆ ಜಿಲ್ಲಾಧಿಕಾರಿಯೇ ಗನ್‌ಮ್ಯಾನ್‌ ಅನ್ನು ವಾಪಸ್‌ ಪಡೆದಿದ್ದಾರೆಂದು ದಾಸ್‌ ಆರೋಪಿಸಿದ್ದಾರೆ. ಇತ್ತ ಗನ್‌ಮ್ಯಾನ್‌ಗಳನ್ನಿಟ್ಟುಕೊಂಡು ದಾಸ್‌ ಜನರನ್ನು ಬೆದರಿಸುತ್ತಿದ್ದರು. ಹಾಗಾಗಿ ವಾಪಸ್‌ ಕರೆಸಿಕೊಂಡೆವು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next