Advertisement

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

01:53 AM Oct 07, 2024 | Team Udayavani |

ಹೊಸದಿಲ್ಲಿ: ಹಳಸಲು ಭಾಷಣದಿಂದ ನಿಮ್ಮ ವೈಫ‌ಲ್ಯ ಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯ ವರನ್ನು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ಮೋದಿ ನಾಮಿಕ್ಸ್‌ ದೇಶದ ಆರ್ಥಿ ಕತೆಗೊಂದು ಶಾಪ’ ಎಂದಿದ್ದಾರೆ. 2013-14ಕ್ಕೆ 2022-23 ರಲ್ಲಿ ಮನೆಗಳಲ್ಲಿ ಆಗಿರುವ ಸಾಲದ ಪ್ರಮಾಣ ಶೇ.241 ಏರಿಕೆಯಾ ಗಿದೆ. ದೇಶದ ಜಿಡಿಪಿ ಯಲ್ಲಿ ಶೇ.40 ಮನೆಗಳಲ್ಲಿನ ಸಾಲವಿದೆ. ಇದು ಸಾರ್ವಕಾಲಿಕ ಗರಿಷ್ಠ. ಮನೆಗಳಲ್ಲಿ ಉಳಿತಾ ಯದ ಪ್ರಮಾಣ ಕಳೆದ 50 ವರ್ಷಗಳಲ್ಲೇ ಕನಿಷ್ಠ ಪ್ರಮಾಣಕ್ಕಿಳಿದಿದೆ. ಉತ್ಪಾದನ ವಲಯದ ಸಂಕಷ್ಟ ಜಾಸ್ತಿಯಾಗಿದೆ ಎಂದು ಕುಟುಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next