Advertisement

ಹೆತ್ತ ಮಗಳನ್ನೇ ಕೈಕಾಲು ಕಟ್ಟಿ ಎಚ್ ಎಲ್ ಸಿ ಕಾಲುವೆಗೆ ಎಸೆದ ಪಾಪಿ ತಂದೆ

02:56 PM Feb 17, 2020 | Suhan S |

ಬಳ್ಳಾರಿ : ಹೆತ್ತ ಮಗಳನ್ನೇ ಕೈಕಾಲು ಕಟ್ಟಿ ಎಚ್ ಎಲ್ ಸಿ ಕಾಲುವೆಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿ ನಗರದ ಹೊರವಲಯ ಬಂಡಿಹಟ್ಟಿಯಲ್ಲಿ ಸೋಮವಾರ ನಡೆದಿದ್ದು,  ಪಾಪಿ ತಂದೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಪಲ್ಲವಿ (22) ತಂದೆ ಸೂರಿ ಅಲಿಯಾಸ್ ಆಟೊ ಸೂರಿಯಿಂದಲೇ ಕಾಲುವೆಗೆ ನೂಕಲ್ಪಟ್ಟ ನತದೃಷ್ಟ ಮಗಳು. ಮಗಳು ಪಲ್ಲವಿ ಆರೋಗ್ಯ ಸಚಿವ ಶ್ರೀರಾಮುಲು ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಮದ್ಯ ಸೇವನೆಗಾಗಿ ಹಣ ಕೇಳುತ್ತಿದ್ದ ತಂದೆಗೆ ಮಗಳು ಪಲ್ಲವಿ ಹಣ ಕೊಡಲ್ಲ ಎಂದಿದ್ದಳು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ತಂದೆ ಮಗಳ ಮಧ್ಯೆ ಜಗಳವಾಗಿತ್ತು.  ಎಂದಿದ್ದ ಮಗಳು ಪಲ್ಲವಿ ಕೋಪದಲ್ಲಿ ನನ್ನ ಸಾಯಿಸಿ ಬಿಡಿ ಎಂದಿದ್ದಳು.   ಈ ವೇಳೆ ಮಗಳು ಪಲ್ಲವಿ ಕೋಪದಲ್ಲಿ ನನ್ನನ್ನು ಸಾಯಿಸಿಬಿಡಿ ಎಂದಿದ್ದಳು. ಇದರಿಂದ ಮಗಳನ್ನ‌ ಪುಸಲಾಯಿಸಿ ಕಾಲುವೆ ಬಳಿ ಕರೆತಂದಿದ್ದ ಪಾಪಿ ತಂದೆ‌‌ ಸೂರಿ, ಕೈ ಕಾಲುಗಳನ್ನು ಕಟ್ಟಿ ಎಚ್ ಎಲ್ ಸಿ ಕಾಲುವೆಗೆ ಎಸೆದಿದ್ದಾನೆ. ಮೂರು ವರ್ಷದ ಹಿಂದೆ ತಾಯಿ ಶಾರದಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಸ್ಥಳಕ್ಕೆ ಕೌಲ್ ಬಜಾರ್ ಪೋಲಿಸರ ಭೇಟಿ ನೀಡಿದ್ದು, ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು  ಯುವತಿಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆ ಬಳಿಕ ಆರೋಪಿ ಸೂರಿ ಪೋಲಿಸರಿಗೆ ಶರಣಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next