Advertisement

ಪಡುಬಿದ್ರಿ: ರೈಲಿನಡಿಗೆ ಬಿದ್ದು ವಿದ್ಯಾರ್ಥಿ ಸಾವು

12:18 AM Oct 19, 2022 | Team Udayavani |

ಪಡುಬಿದ್ರಿ: ಸೂಡ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಆದರ್ಶ್‌ (17) ಬೆಳ್ಮಣ್ಣಿನ ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿದ್ದು, ನಂದಿಕೂರು ಗ್ರಾಮದ ಬಳಿಯ ಕೊಳಚೂರುವಿನಲ್ಲಿ ಮಂಗಳವಾರ ಬೆಳಗ್ಗಿನ ಗರೀಬ್‌ ರಥ್‌ ರೈಲಿನಡಿ ಬಿದ್ದು ಸಾವನ್ನಪ್ಪಿದ್ದಾನೆ.

Advertisement

ಈತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಉತ್ತಮ ಕ್ರಿಕೆಟ್‌ ಪಟುವೂ ಆಗಿದ್ದ. ಇತ್ತೀಚೆಗಷ್ಟೇ ರಾಜ್ಯಮಟ್ಟದಲ್ಲಿ ಕ್ರಿಕೆಟ್‌ ಸ್ಪರ್ಧೆಗೂ ಆಯ್ಕೆಯಾಗಿದ್ದು, ಯಾವುದೋ ಮಾನಸಿಕ ದುಗುಡ, ದುಮ್ಮಾನಗಳಿಂದ ಚಲಿಸುವ ರೈಲಿನಡಿ ಬಿದ್ದು ಸಾವನ್ನಪ್ಪಿದ್ದಾನೆ.

ಗರೀಬ್‌ ರಥ್‌ ರೈಲಿನ ಪೈಲಟ್‌ ಕಂಟ್ರೋಲ್‌ ರೂಮ್‌ಗೆ ತಿಳಿಸಿದ್ದು, ರೈಲ್ವೇ ಗ್ಯಾಂಗ್‌ಮನ್‌ ಉಮೇಶ್‌ ಈ ಮಾರ್ಗದಲ್ಲಿ ಶೋಧ ನಡೆಸಿದಾಗ ಆದರ್ಶ್‌ನ ಮೃತದೇಹ ಪತ್ತೆಯಾಗಿದೆ. ಹಳಿಯ ಪಕ್ಕದಲ್ಲೇ ಇದ್ದ ಸ್ಕೂಟರ್‌ ಪರಿಶೀಲನೆ ನಡೆಸಿ ಅದರಲ್ಲಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಆದರ್ಶ್‌ನ ಕುರಿತು ಮಾಹಿತಿ ಲಭ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next