Advertisement

ತಲಪಾಡಿ: ಬಾರ್‌ನಲ್ಲಿ ದಾಂಧಲೆ, ಹಲ್ಲೆ

10:10 AM Apr 13, 2018 | Team Udayavani |

ಉಳ್ಳಾಲ: ತಲಪಾಡಿಯಲ್ಲಿ ಬಾರ್‌ಗೆ ನುಗ್ಗಿ ದಾಂಧಲೆ ನಡೆಸಿದ ತಂಡ ಇಬ್ಬರು ನೌಕರರಿಗೆ ಹಲ್ಲೆ ನಡೆಸಿ ಕ್ಯಾಶ್‌ ಕೌಂಟರ್‌ನಲ್ಲಿದ್ದ ನಗದು ಸಹಿತ ಮದ್ಯದ ಬಾಟಲಿಗಳನ್ನು ಲೂಟಿಗೈದ ಘಟನೆ ಬುಧವಾರ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಯಲ್ಲಿ ಬಾರ್‌ನ ನೌಕರರಾದ ಪ್ರವೀಣ್‌ ಮತ್ತು ಸುಜಿತ್‌ ಗಾಯಗೊಂಡಿದ್ದಾರೆ. ಸ್ಥಳೀಯರಾದ ನಿಚ್ಚು, ಸಂದೇಶ, ಗಣೇಶ, ರಾಹುಲ್‌, ರಮಾನಂದ, ಕಿರಣ್‌, ಶಿವ ಸಹಿತ 12 ಮಂದಿಯ ತಂಡ ದಾಂಧಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

Advertisement

ಘಟನೆ ಹಿನ್ನೆಲೆ
ತಲಪಾಡಿ ದೇವಿಪುರದ ಅತಿಥಿ ಬಾರ್‌ಗೆ ಎ. 10ರ ತಡರಾತ್ರಿ ಬಂದಿದ್ದ ಇಬ್ಬರ ತಂಡ ಮದ್ಯ ಕೊಡುವಂತೆ ಕೇಳಿತ್ತು. ಆದರೆ 11 ಗಂಟೆ ಕಳೆದ ಕಾರಣ ಮದ್ಯ ಕೊಡಲಾಗುವುದಿಲ್ಲ ಎಂದು ಸಿಬಂದಿ ಹೇಳಿದ್ದರು. ಆಗ ಆಕ್ರೋಶಗೊಂಡ ತಂಡ ಬಾರ್‌ನ ಕಿಟಕಿ ಗಾಜನ್ನು ಪುಡಿಗೈದಿತು. ಬಳಿಕ ಸಿಬಂದಿ ಜತೆಗೆ ವಾಗ್ವಾದಕ್ಕೆ ಇಳಿದಾಗ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಆಗಮಿಸಿದಾಗ ಓರ್ವ ಪರಾರಿಯಾಗಿದ್ದು, ಸೋಮ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ನಿಚ್ಚು ಎಂಬಾತನಿಗೆ ಸೇರಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದರು. ಇದಕ್ಕೆ ಪ್ರತೀಕಾರ ತೀರಿಸಲು ಬುಧವಾರ ನಿಚ್ಚು ನೇತೃತ್ವದ ಯುವಕರ ತಂಡ ಬಾರ್‌ಗೆ ನುಗ್ಗಿ ದಾಂಧಲೆ ನಡೆಸಿದೆ. ಘಟನೆ ಸಂದರ್ಭ ತಂಡದಲ್ಲಿದ್ದ ಕೆಲವರು ಹೆಲ್ಮೆಟ್‌ ಮತ್ತು ಮುಖಕ್ಕೆ ಬಟ್ಟೆ ಕಟ್ಟಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next