Advertisement

Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

08:29 PM Jul 02, 2024 | Team Udayavani |

ಕಾರುಗಳು ಪರಸ್ಪರ ಢಿಕ್ಕಿ: ವೃದ್ಧ ಸಾವು, ಮೂವರಿಗೆ ಗಾಯ

Advertisement

ಮಂಜೇಶ್ವರ: ವರ್ಕಾಡಿ ಮೊರತ್ತಣೆ ಜಂಕ್ಷನ್‌ನಲ್ಲಿ ಎರಡು ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ವೃದ್ಧರೋರ್ವರು ಸಾವಿಗೀಡಾಗಿ, ಮೂವರು ಗಂಭೀರ ಗಾಯಗೊಂಡ ಘಟನೆ ಜು. 1ರಂದು ರಾತ್ರಿ 11 ಗಂಟೆಗೆ ಸಂಭವಿಸಿದೆ.

ತಲೇಕಳ ಕುದ್ರೆಪ್ಪಾಡಿ ನಿವಾಸಿ ಅಬೂಬಕರ್‌ ಮುಸ್ಲಿಯಾರ್‌ (65) ಮೃತಪಟ್ಟವರು. ಪತ್ನಿ ಆಮಿನ, ಪುತ್ರಿ ಸುಮಯ್ಯ ಮತ್ತು ಸೊಸೆ ಸಾಬಿರ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲ್ಟೋ ಕಾರಿಗೆ ಇನ್ನೋವ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಗಂಭೀರ ಗಾಯಗೊಂಡ ಅಬೂಬಕರ್‌ ಮುಸ್ಲಿಯಾರ್‌ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವಸ್ಥಾನದಲ್ಲಿ ಕಳವು

Advertisement

ಕಾಸರಗೋಡು: ಪಯ್ಯನ್ನೂರು ಸಮೀಪದ ತಾಯಿನೇರಿ ವೆಳ್ಳಾರಂಙರ ಶ್ರೀ ಭಗವತೀ ದೇವಸ್ಥಾನದಿಂದ ಎರಡೂವರೆ ಪವನಿನ ಚಿನ್ನಾಭರಣವನ್ನು ಕಳವು ಮಾಡಲಾಗಿದೆ.

ಜೂನ್‌ 29 ಮತ್ತು 30ರ ಮಧ್ಯೆ ಕಳವು ನಡೆದಿರಬೇಕೆಂದು ಶಂಕಿಸಲಾಗಿದೆ. ಪಯ್ಯನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಭಾರತೀಯ ನ್ಯಾಯಸಂಹಿತೆ: ಜಿಲ್ಲೆಯ ಪ್ರಥಮ ಪ್ರಕರಣ; ಅಂಬಲತ್ತರದಲ್ಲಿ ದಾಖಲು

ಕಾಸರಗೋಡು: ಭಾರತೀಯ ನ್ಯಾಯಸಂಹಿತೆ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಪ್ರಕರಣ ಅಸಹಜ ಸಾವಿಗೆ ಸಂಬಂಧಿಸಿ ಅಂಬಲತ್ತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಅಂಬಲತ್ತರ ಬೇಳೂರು ತಟ್ಟುಮ್ಮಲ್‌ನ ಮನೆಯ ಆಗ್ರೋ ಇಂಡಸ್ಟ್ರಿಯಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಭುರಾಂ (50) ಅವರ ಸಾವಿಗೆ ಸಂಬಂಧಿಸಿ ಕೇಸು ದಾಖಲಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) 194 ಪ್ರಕಾರ ಪೊಲೀಸ್‌ ಈ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಜು. 1ರಂದು ಮುಂಜಾನೆ 12.30ರ ವೇಳೆ ಇವರು ಸಾವಿಗೀಡಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next