Advertisement

Crime News: ಅರಂತೋಡು ಭಾಗದ ಸುದ್ದಿಗಳು

09:11 PM May 14, 2024 | Team Udayavani |

ಹೃದಯಾಘಾತದಿಂದ ವ್ಯಕ್ತಿ ಸಾವು

Advertisement

ಅರಂತೋಡು: ಹೊಟೇಲ್‌ನಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಕಲ್ಲುಗುಂಡಿಯಿಂದ ವರದಿಯಾಗಿದೆ.

ಇಲ್ಲಿನ ಹೊಟೇಲ್‌ನಲ್ಲಿ ಕೆಲಸಕ್ಕೆ ಇದ್ದ ಕೇರಳ ಮೂಲದ ವಿಶ್ವನಾಥ್‌ ಅವರು ಹಠಾತ್‌ ಹೃದಯಾಘಾತದಿಂದ ಮೃತಪಟ್ಟರು. ಅವರು ರವಿವಾರ ರಾತ್ರಿ ಕೆಲಸ ಮುಗಿಸಿ ಊಟ ಮಾಡಿ ಮಲಗಿದ್ದರೆನ್ನಲಾಗಿದೆ. ಬೆಳಗ್ಗಿನ ಜಾವ ನೋಡಿದಾಗ ಮೃತಪಟ್ಟಿದ್ದರು.

ಅಪರಿಚಿತ ವ್ಯಕ್ತಿ ಸಾವು

ಅರಂತೋಡು: ಆಲೆಟ್ಟಿ ಗ್ರಾಮದ ಅರಂಬೂರು  ಮರದ ಡಿಪೋ ಬಳಿಯ ಬಸ್‌ ತಂಗುದಾಣದ ಪಕ್ಕ ಅಪರಿಚಿತ  ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.

Advertisement

ಮೃತ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಬಸ್‌ ತಂಗುದಾಣದಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರಸುದಾರರು ಸುಳ್ಯ ಪೊಲೀಸ್‌ ಠಾಣೆಯನುನ ಸಂಪರ್ಕಿಸಬಹುದು.

ಕಾರು-ಪಿಕಪ್‌ ಢಿಕ್ಕಿ: ಕೆಲವರಿಗೆ ಗಾಯ

ಅರಂತೋಡು: ಕಾರು ಮತ್ತು ಪಿಕಪ್‌ ಮಧ್ಯೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಕಾರಿನ ಮುಂಭಾಗ ಜಖಂಗೊಂಡ ಘಟನೆ ಸಂಪಾಜೆ ಗ್ರಾಮದ ಅರೆಕಲ್ಲು ಬಳಿ ಸೋಮವಾರ ಸಂಭವಿಸಿದೆ.

ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹಾಗೂ ಸಂಪಾಜೆಯ ಅರೆಕಲ್ಲು ಬಳಿಯಿಂದ ರಬ್ಬರ್‌ ಹಾಲು ತೆಗೆದುಕೊಂಡು ಬರುತ್ತಿದ್ದ ಪಿಕಪ್‌ ನಡುವೆ  ಸಂಪಾಜೆ ಅರೆಕಲ್ಲು ರೋಡಿನ ತಿರುವಿನಲ್ಲಿ ಢಿಕ್ಕಿ ಸಂಭವಿಸಿದೆ. ಕಾರಿನೊಳಗಿದ್ದವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next