Advertisement

ಬೈಂದೂರು: ಏಣಿಗೆ ವಿದ್ಯುತ್‌ ತಂತಿ ಸ್ಪರ್ಶ: ಉದ್ಯಮಿ ಸಾವು

12:24 AM Oct 19, 2022 | Team Udayavani |

ಬೈಂದೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಣಿಗೆ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟ ಘಟನೆ ಘಟನೆ ಮಂಗಳವಾರ ಬೆಳಗ್ಗೆ ಶಿರೂರಿನಲ್ಲಿ ನಡೆದಿದೆ.

Advertisement

ನಿವೃತ್ತ ಕಂದಾಯ ಅಧಿಕಾರಿ ಸುಬ್ರಾಯ ಪ್ರಭು ಅವರ ಪುತ್ರ, ಶಿರೂರಿನ ಬಿಜೆಪಿ ಮುಖಂಡ, ಉದ್ಯಮಿ, ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸತೀಶ ಸುಬ್ರಾಯ ಪ್ರಭು (52) ಮೃತಪಟ್ಟವರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸದಸ್ಯರಾಗಿ, ಪೇಟೆ ವೆಂಕಟರಮಣ ದೇವಸ್ಥಾನದ ಸಮಿತಿ ಸದಸ್ಯರಾಗಿ, ಪ್ರಗತಿಪರ ಕೃಷಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಸಾಮಾಜಿಕ ಕ್ಷೇತ್ರದ ಮುಂದಾಳಾಗಿರುವ ಸತೀಶ ಪ್ರಭು ಅವರು ಹಲವು ವರ್ಷ ಪ್ರಭು ಡ್ರೆಸ್‌ಲ್ಯಾಂಡ್‌ ಬಟ್ಟೆ ಮಳಿಗೆ ಮಾಲಕರಾಗಿದ್ದರು.

ಗಣ್ಯರ ಸಂತಾಪ‌
ಅವರ ನಿಧನಕ್ಕೆ ಶಾಸಕ ಸುಕುಮಾರ್‌ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next