Advertisement

Crime News; ಬ್ರಹ್ಮಾವರ ಭಾಗದ ಅಪರಾಧ ಸುದ್ದಿಗಳು

09:16 PM Sep 13, 2023 | Team Udayavani |

ಕಾರು ಢಿಕ್ಕಿ: ಗಾಯ
ಬ್ರಹ್ಮಾವರ: ಕೊಕ್ಕರ್ಣೆ ಮೊಗವೀರಪೇಟೆ ಬಳಿ ಮಂಗಳವಾರ ರಸ್ತೆ ಬದಿಯಲ್ಲಿ ನಿಂತು ಬಸ್‌ ಚಾಲಕನ ಬಳಿ ಮಾತನಾಡುತ್ತಿದ್ದ ಶೇಖರ ಅವರಿಗೆ ಕಾರೊಂದು ಢಿಕ್ಕಿ ಹೊಡೆದು ಸಣ್ಣ ಪುಟ್ಟ ಗಾಯಗಳಾಗಿವೆ.

Advertisement

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಜುಗಾರಿ ನಿರತನ ಬಂಧನ
ಬ್ರಹ್ಮಾವರ: ಇಲ್ಲಿನ ಪೇಟೆ ರಿಕ್ಷಾ ನಿಲ್ದಾಣ ಸಮೀಪ ಮಂಗಳವಾರ ಮಟ್ಕಾ ಜುಗಾರಿ ನಡೆಸುತ್ತಿದ್ದ ಅಮ್ಮುಂಜೆ ಮೂಲದ ಪ್ರಸ್ತುತ ಪೇತ್ರಿ ಪೇಟೆಯಲ್ಲಿ ವಾಸವಿರುವ ಪ್ರಶಾಂತನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೂ. 1,630 ನಗದು ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಶರಾಬು ಅಕ್ರಮ ಸೇವನೆ
ಬ್ರಹ್ಮಾವರ: ಬಾರಕೂರು ಕಲ್ಚಪ್ರ ಬಳಿ ವೈನ್‌ ಶಾಪ್‌ ಹಿಂಬದಿ ಕಟ್ಟಡದ ತೆರೆದ ಸ್ಥಳದಲ್ಲಿ ಶರಾಬು ಅಕ್ರಮ ಸೇವನೆ ಪತ್ತೆಯಾಗಿದೆ.

ಕಾರ್ತಿಕ್‌, ಶರತ್‌, ಧನುಷ್‌, ಶಶಿಧರ್‌, ಮದನ್‌, ಸುಶಾಂತ್‌, ವಿಘ್ನೇಶ್‌, ಸುನಿಲ್‌, ವಸಂತ್‌, ರಾಘು ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಬ್ರಹ್ಮಾವರ ಪೊಲೀಸರು ದಾಳಿ ಮಾಡಿದ್ದು ಓರ್ವ ಪರಾರಿಯಾಗಿದ್ದಾನೆ. ಮದ್ಯ ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

Advertisement

ಗಾಂಜಾ ಸೇವನೆ:ಇಬ್ಬರು ವಶಕ್ಕೆ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವಿಶಾಲ್‌ ಕುಮಾರ್‌ (30), ದಿಲೀಪ್‌ ಬಿ.ಜಿ. (21)ಯನ್ನು ಸೆನ್‌ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next