Advertisement

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

12:35 AM Aug 14, 2022 | Team Udayavani |

ಉಡುಪಿ: ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

Advertisement

ಮಣಿಪಾಲದಲ್ಲಿ ಉದ್ಯಮ ನಡೆಸುತ್ತಿರುವ ತಬಸ್ಸುಮ್‌ ಅವರು 2022ರ ಜ. 13ರಂದು ಹೊಸಪೇಟೆಯ ನಿವಾಸಿ ಜಿ. ರಾಜ ಹುಸೇನ್‌ ಅವರನ್ನು ಉಡುಪಿಯ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ರಿಜಿಸ್ಟ್ರಾರ್‌ ವಿವಾಹವಾಗಿದ್ದರು. ಮದುವೆ ಸಂದರ್ಭದಲ್ಲಿ ಆತನಿಗೆ 1 ವಾಚ್‌ ಹಾಗೂ 1. 50 ಲ.ರೂ. ನೀಡಲಾಗಿತ್ತು.

ಮದುವೆಯಾದ ವಾರದ ಬಳಿಕ ಆತ ಹಣಕ್ಕಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈಗಾಗಲೇ ಒಂದು ಮದುವೆ ಯಾಗಿದ್ದ ಆತನ ಮೊದಲ ಹೆಂಡತಿ ಶಹನಾಜ್‌ ಬೇಗಂ, ಆಕೆಯ ಅಣ್ಣ ಶಬ್ಬೀರ್‌, ಅಣ್ಣನ ಹೆಂಡತಿ ಶಮಾ ಪರ್ವೀನ್‌, ಮೊದಲ ಹೆಂಡತಿಯ ಪುತ್ರ ಅಜರುದ್ದೀನ್‌ ಹಾಗೂ ಇರ್ಫಾನ್‌ ಅವರು ಮನೆಗೆ ಬಂದು ಚಿನ್ನ ಹಾಗೂ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು.

ವಿಚಾರಿಸಿದಾಗ ಅವರು ರಾಜ ಹುಸೇನ್‌ ಅವರ ಅಂಗಡಿ ನಷ್ಟದಲ್ಲಿದೆ. ನೀನು ಹಣ ನೀಡಬೇಕು, ಇಲ್ಲದಿದ್ದರೆ ಹೊಸಪೇಟೆಯಲ್ಲಿ ಬಟ್ಟೆ ಅಂಗಡಿ ಹಾಕಬೇಕೆಂದು ತಿಳಿಸಿದ್ದರು. ಅನಂತರ ಬಟ್ಟೆ ಅಂಗಡಿ ಹಾಕಲೆಂದು ಕೈಸಾಲ ಪಡೆದು ಆತನಿಗೆ 3.60 ಲ.ರೂ.ಗಳನ್ನು ನೀಡಿದ್ದೇನೆ. ನಮಗೆ ಸಂಬಂಧಿಸಿದ 2 ಬೈಕ್‌ಗಳನ್ನೂ ನಮ್ಮ ಇಚ್ಛೆಯ ವಿರುದ್ಧವಾಗಿ ಆತ ಇಟ್ಟುಕೊಂಡಿದ್ದಾನೆ. ಒಂದು ಬಾರಿ 50 ಸಾವಿರ ರೂ., ಮತ್ತೂಂದು ಬಾರಿ 1 ಲ.ರೂ. ನೀಡಲಾಗಿದೆ. ಬಳಿಕ ಜು. 7ರಂದು ಹಬ್ಬದ ಸಲುವಾಗಿ ಹೊಸಪೇಟೆಗೆ ತೆರಳಿ ಹಿಂದಿರುಗಿ ಬಂದ ಬಳಿಕ ರಾಜ ಹುಸೇನ್‌ ಗಲಾಟೆ ಮಾಡಿ ಮುಖ, ಹೊಟ್ಟೆಗೆ ಕಾಲಿನಿಂದ ತುಳಿದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಬಸ್ಸುಮ್‌ ಅವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next