Advertisement

ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದ ಬಸ್‌; ಬೈಕ್‌ ಸವಾರ ಸಾವು

01:07 AM Jul 10, 2022 | Team Udayavani |

ಕುಂಬಳೆ: ಕೇರಳ ರಾಜ್ಯ ರಸ್ತೆ ಸಾರಿಗೆಯ ಬಸ್‌ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದ ಪರಿಣಾಮ ಹಿಂದಿನಿಂದ ಬಂದ ಬೈಕ್‌ ಹಾಗೂ ಬಸ್‌ ಢಿಕ್ಕಿ ಹೊಡೆದು ಸವಾರ ಬಸ್‌ನಡಿ ಸಿಲುಕಿ ಸಾವಿಗೀಡಾದ ಘಟನೆ ಮಲೆನಾಡ ಹೆದ್ದಾರಿಯ ಕಾಟ್ಟುಂಕವಲ ಚುರುತ್ತಿಲ್‌ನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಈಟಿತಟ್‌ ನಿವಾಸಿ, ರಬ್ಬರ್‌ ಟ್ಯಾಂಪಿಂಗ್‌ ಕಾರ್ಮಿಕ ಕಪ್ಪಲ್‌ ಮಾಕೆಲ್‌ ಜೋಶಿ (45) ಮೃತರು.

ಗಾಳಿ ಮಳೆಗೆ ಕೆಲವು ದಿನಗಳ ಹಿಂದೆ ಈ ರಸ್ತೆಯ ಒಂದು ಭಾಗ ಕುಸಿದು ವಾಹನ ಸಂಚಾರಕ್ಕೆ ತಡೆಯಾಗಿತ್ತು. ಬಳಿಕ ರಸ್ತೆಯಲ್ಲಿ ಏಕಮುಖವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಆದರೆ ಪ್ರಯಾಣಿಕರು ರಸ್ತೆಯ ಎತ್ತರ ಪ್ರದೇಶದಿಂದ ಬಸ್‌ ಏರಬೇಕಾಗಿತ್ತು.

ಪ್ರಯಾಣಿಕರನ್ನು ಹತ್ತಿಸಲು ಬಸ್‌ ನಿಲ್ಲಿಸಿದಾಗ ಬಸ್‌ ಹಿಂದೆ ಸರಿದು ಅಪಘಾತ ಸಂಭವಿಸಿದೆ. ಬಸ್ಸಿನಡಿಗೆ ಸಿಲುಕಿದ ಜೋಶಿ ಅವರನ್ನು ಹೊರ ತೆಗೆದು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next