Advertisement

ಬೆಂಗಳೂರು: ವಿಚ್ಛೇದಿತ ಮಹಿಳೆ ಮೇಲೆ ಆ್ಯಸಿಡ್‌ ದಾಳಿ;  ಆರೋಪಿ ಬಂಧನ

11:56 PM Jun 10, 2022 | Team Udayavani |

ಬೆಂಗಳೂರು: ನಗರದಲ್ಲಿ ಯುವತಿ ಮೇಲೆ ಆ್ಯಸಿಡ್‌ ದಾಳಿ ನಡೆದ ಪ್ರಕರಣ ಮಾಸುವ ಮುನ್ನವೇ ಶುಕ್ರವಾರ ಮತ್ತೊಂದು ಆ್ಯಸಿಡ್‌ ದಾಳಿ ನಡೆದಿದೆ.

Advertisement

ಅಗರಬತ್ತಿ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದ ವಿಚ್ಛೇದಿತ ಮಹಿಳೆ ಮೇಲೆ ಗೋರಿಪಾಳ್ಯ ನಿವಾಸಿ ಅಹ್ಮದ್‌ ಎಂಬಾತ ಶುಕ್ರವಾರ ಬೆಳಗ್ಗೆ ಸಾರಕ್ಕಿ ಸಿಗ್ನಲ್‌ ಬಳಿ ಆ್ಯಸಿಡ್‌ ಎರಚಿದ್ದಾನೆ.

ಪರಿಣಾಮ 34 ವರ್ಷದ ಮಹಿಳೆಯ ಕಣ್ಣಿಗೆ ಗಾಯವಾಗಿದ್ದು, ಸಂಜಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣದ ವಿವರ
ಅಗರಬತ್ತಿ ಕಾರ್ಖಾನೆಯಲ್ಲಿ ವಿಚ್ಛೇದಿತ ಮಹಿಳೆ ಹಾಗೂ ಆರೋಪಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಮಹಿಳೆಗೆ ಮೂವರು ಮಕ್ಕಳಿದ್ದು, ಆರೋಪಿ ಅಹ್ಮದ್‌ಗೂ ಮದುವೆಯಾಗಿದೆ ಎನ್ನಲಾಗಿದೆ. ಆದರೂ ತನ್ನನ್ನು ಮದುವೆಯಾಗುವಂತೆ ಆರೋಪಿಯು ಸಂತ್ರಸ್ತೆ ಮೇಲೆ ಒತ್ತಡ ಹಾಕುತ್ತಿದ್ದ. ಆದರೆ ಆಕೆ ಸ್ಪಂದಿಸಿರಲಿಲ್ಲ. ಇದರಿಂದ ಆರೋಪಿ ಕೋಪಗೊಂಡಿದ್ದು, ಗುರುವಾರ ಇದೇ ವಿಚಾರವಾಗಿ ಮಹಿಳೆಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ.

ಆ್ಯಸಿಡ್‌ ನಿಷೇಧಕ್ಕೆ ಚಿಂತನೆ: ಆರಗ
ಆ್ಯಸಿಡ್‌ ಅನ್ನು ಬೇರೆ ಕಾರ್ಯಕ್ಕೆ ಬಳಸು ವುದರಿಂದ ನಿಷೇಧ ಹೇರಬಹುದೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತ ನಾಡಿರುವ ಅವರು, ದಾಳಿ ಸಂಬಂಧ ಅಧಿಕಾರಿ ಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next