Advertisement

ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಎಎಸ್ ಐ ಮೇಲೆ ಯುವಕನಿಂದ ಹಲ್ಲೆ : ಪ್ರಕರಣ ದಾಖಲು

10:16 PM Jun 01, 2021 | Team Udayavani |

ಕಲಬುರಗಿ : ಮಾಸ್ಕ್ ಹಾಗೂ ವಾಹನ ತಪಾಸಣೆ ನಡೆಸುತ್ತಿದ್ದ ಅಶೋಕನಗರದ ಮಹಿಳಾ ಎಎಸ್ ಐ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ನಗರದ ರಾಷ್ಟ್ರಪತಿ ವೃತ್ತದ ಬಳಿ ಸೋಮವಾರ ನಡೆದಿದೆ.

Advertisement

ಅಶೋಕ ನಗರ ಠಾಣೆಯ ಎಎಸ್ ಐ ಸುಮಂಗಲಾ ಅವರು ನಗರದಲ್ಲಿ ವಾಹನ ತಪಾಸಣೆ ನೆಡೆಸುತ್ತಿದ್ದ ವೇಳೆ ಕಲಬುರಗಿ ತಾಲೂಕಿನ ಜೋಗುರು ಗ್ರಾಮದ ನಿವಾಸಿ ಮಹೇಶ ಹೂಗಾರ ಅನ್ನೋ ಯುವಕ ಹಲ್ಲೆ ನಡೆಸಿದ್ದಾನೆ, ಈ ವೇಳೆ ಅಲ್ಲಿದ್ದ ಸ್ಥಳೀಯರು ಆರೋಪಿ ಮಹೇಶನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ಮಾಡಿದ ಮಹೇಶನ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಯೋಗೀಶ್ವರ್ ಗೆ ಇಂಧನ ಖಾತೆ ಸಹಿತ ಡಿಸಿಎಂ ಹುದ್ದೆ ನೀಡಿದರೂ ಅಚ್ಚರಿ ಪಡಬೇಕಿಲ್ಲ: ಯತ್ನಾಳ

Advertisement

Udayavani is now on Telegram. Click here to join our channel and stay updated with the latest news.

Next