Advertisement

ಕೆಜಿಎಫ್: ಮೂರ್ತಿ ಭಂಜನ, ಕತ್ತಿ ಹಿಡಿದು ತಿರುಗಿದ ದುಷ್ಕರ್ಮಿ

05:01 PM Jan 25, 2021 | Team Udayavani |

ಕೆಜಿಎಫ್: ನಗರದ ಸುಸೈಪಾಳ್ಯಂನಲ್ಲಿರುವ ಶ್ರೀ ಮುನೇಶ್ವರ ದೇವಾಲಯದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದ ದುಷ್ಕರ್ಮಿಯೊಬ್ಬ ದೇವಾಲಯದ ಪ್ರತಿಮೆ ಧ್ವಂಸಗೊಳಿಸಿ, ಕತ್ತಿ ತೆಗೆದುಕೊಂಡು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.

Advertisement

ದೇವಾಲಯದ ಒಳಗೆ ಬಂದ ದುಷ್ಕರ್ಮಿ ತ್ರಿಶೂಲ ಕೆಡವಿದ್ದಾನೆ. ನಂತರ ಸ್ವಾಮಿಯ ಬಲಗೈಯನ್ನು ನಾಶ ಮಾಡಿ, ಅದರಲ್ಲಿದ್ದ
ಸುಮಾರು ಮೂರು ಅಡಿ ಉದ್ದದ ಕತ್ತಿಯನ್ನು ತೆಗೆದುಕೊಂಡಿದ್ದಾನೆ. ನಂತರ ಸಾರ್ವಜನಿಕವಾಗಿ ಕತ್ತಿ ಪ್ರದರ್ಶಿಸುತ್ತಾ ಮುಖ್ಯ ಬೀದಿಯಲ್ಲಿ ಹಾದುಹೋಗಿದ್ದಾನೆ. ಈ ಎಲ್ಲಾ ಕೃತ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.

ಸದರಿ ಕೃತ್ಯ ಬಡಾವಣೆಯ ಜನರನ್ನು ತಲ್ಲಣಗೊಳಿಸಿದೆ. ಮೂರ್ತಿ ಭಂಜನ ಮಾಡಿ, ಕತ್ತಿಯನ್ನು ಝಳಪಿಸುತ್ತಾ ಹೋಗಿರುವುದು
ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ದೇವಾಲಯದ ಮುಖ್ಯಸ್ಥ ಸುಂದರೇಶನ್‌ ಆಂಡರಸನ್‌ಪೇಟೆ ಪೊಲೀಸರಿಗೆ ದೂರು
ನೀಡಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌, ಕಾಂಗ್ರೇಸ್ – ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ

Advertisement

Udayavani is now on Telegram. Click here to join our channel and stay updated with the latest news.

Next