Advertisement
ರಾಮನಗರ: ಬೆಂಗಳೂರು ನಗರ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರು ಐಕ್ಯವಾದ ಸ್ಥಳದ ಅಭಿವೃದ್ಧಿ ಜೊತೆಗೆ ಕೆಂಪೇಗೌಡರ ಸರ್ಕ್ನೂಟ್ನಲ್ಲಿ ಮಾಗಡಿ ತಾಲೂಕಿನ 10 ಪಾರಂಪರಿಕ ಸ್ಥಳಗಳನ್ನು 132 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ.
Related Articles
Advertisement
132 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಜಿಲ್ಲೆಯ ಮಾಗಡಿ ಸರ್ಕ್ನೂಟ್ನಲ್ಲಿ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರ ವೀರ ಸಮಾಧಿ ಸ್ಥಳದ ಅಭಿ ವೃದ್ಧಿ ಜೊತೆಗೆ ದೊಡ್ಡಮುದಗೆರೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಕೆಂಪಸಾಗರ ಕೆರೆ, ಮಾಗಡಿ ಕೋಟೆ, ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಮತ್ತು ಕಲ್ಯಾಣಿ, ಸಾವನ ದುರ್ಗ ಕೋಟಿ ಮತ್ತು ಶಿವ ದೇವಾಲಯ, ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ಗಡಿಯಲ್ಲಿರುವ ಕುಣಿಗಲ್ ದೊಡ್ಡ ಕೆರೆ, ಶಿವ ಬಸವ ದೇವಸ್ಥಾನ, ಹುತ್ತಿ ದುರ್ಗ ಕೋಟಿ ಮತ್ತು ದೇವಸ್ಥಾನಗಳನ್ನು ಸುಮಾರು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿ ವೃದ್ಧಿಪಡಿಸಿಲು ಸರ್ಕಾರ ಉದ್ದೇಶಿಸಿದೆ. ಹಿರಿಯ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಬಿಬಿಎಂಪಿ 11ಕೋಟಿ ರೂ. ಮೀಸಲಿಟ್ಟಿದೆ. ಕೆಂಪಾಪುರ ಗ್ರಾಮ ಸ್ಥಳಾಂತರ: 2015ರಲ್ಲಿ ಹಿರಿಯ ಕೆಂಪೇಗೌಡರ ಸಮಾಧಿ ಸ್ಥಳವನ್ನು ಕೆಂಪಾಪುರದಲ್ಲಿ ಪತ್ತೆಯಾದ ನಂತರ ಸರ್ಕಾರ ಸದರಿ ಸ್ಥಳವನ್ನು ಅಭಿ ವೃದ್ಧಿಗೆ ನಿರ್ಧರಿಸಿತ್ತು. ಸಮಾಧಿ ಸ್ಥಳವನ್ನು ಪಾರಂಪ ರಿಕ ಸ್ಥಳವನ್ನಾಗಿ ಮತ್ತು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶ ಸರ್ಕಾರ ಹೊಂದಿದ್ದು, ಕೆಂಪಾ ಪುರ ಗ್ರಾಮವನ್ನೇ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಸಿ ಸಿದೆ. 5 ಕಿ.ಮಿ. ದೂರದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಕೆಂಪಾಪುರ ಗ್ರಾಮಸ್ಥರಿಗೆ ಮನೆ ಕಟ್ಟಿಕೊ ಳ್ಳಲು ನಿವೇಶನಗಳನ್ನು ಕೊಡಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ನಂದಿ, ಬೆಂಗಳೂರು ನಗರ ಸರ್ಕ್ನೂಟ್ನ ಸ್ಥಳಗಳು: ನಂದಿ ಸರ್ಕ್ನೂಟ್ನಲ್ಲಿ ಕೆಂದಾವರ ಕೆರೆ, ನಂದಿ ಬೆಟ್ಟ, ನಂದಿ ಬೆಟ್ಟದ ಗೋಪುರ, ದೇವನಹಳ್ಳಿ ಫಾರೆಸ್ಟ್, ದೇವ ನಹಳ್ಳಿ ಕೋಟೆ, ಶ್ರೀಚನ್ನಕೇಶವ ದೇವಸ್ಥಾನವನ್ನು (ಅವತಿ) ಅಭಿವೃದ್ಧಿಗೆ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತ ರದ ಕೆಂಪೇಗೌಡರ ಪ್ರತಿಮೆ ಮತ್ತು ವಿಮಾನ ನಿಲ್ದಾ ಣಕ್ಕೆ ಸೇರಿದ23 ಎಕರೆ ಪ್ರದೇಶದಲ್ಲಿ ಸೆಂಟ್ರಲ್ ಥೀಮ್ ಪಾರ್ಕನ್ನು ನಿರ್ಮಿಸಲು ಸರ್ಕಾರ ಅಂದಾಜು 64 ಕೋಟಿ ರೂ. ವೆಚ್ಚ ಮಾಡಲಿದೆ. ಬೆಂಗಳೂರು ನಗರ ಸರ್ಕ್ನೂಟ್ನಲ್ಲಿಕೆಂಪೇಗೌಡರ ವೀಕ್ಷಣಾ ಗೋಪುರ (ಮೇಖೀ ವೃತ್ತ), ಅಣ್ಣಮ್ಮ ದೇವ ಸ್ಥಾನ, ಸೋಮೇಶ್ವರ ದೇವಾಸ್ಥಾನ, ಹಲಸೂರು ಗೋಪುರ, ಬೆಂಗಳೂರು ಕೋಟೆ, ಕೋಟೆ ವೆಂಕಟರ ಮಣ ದೇವಸ್ಥಾನ, ಶ್ರೀ ಧರ್ಮರಾಯ ಸ್ವಾಮಿ ದೇವ ಸ್ಥಾನ, ಕೆಂಪೇಗೌಡರ ಪ್ರತಿಮೆ ವೃತ್ತ, ಕೆಂಪಾಂಬುದಿ ಕೆರೆ, ಶ್ರೀಗವಿ ಗಂಗಾಧರೇಶ್ವರ ದೇವಸ್ಥಾನ, ಶ್ರೀಬಂಡಿ ಮಹಾ ಕಾಳಿ ದೇವಸ್ಥಾನ ವೀರಭದ್ರಸ್ವಾಮಿ ದೇವಸ್ಥಾನ.