Advertisement

ದನಗಳ್ಳತನ; ಆರು ಆರೋಪಿತರ ಬಂಧನ

06:01 PM Dec 17, 2021 | Team Udayavani |

ವಿಜಯಪುರ: ನಗರದಲ್ಲಿ ನಡೆಯುತ್ತಿದ್ದ ದನಗಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಆರು ಆರೋಪಿತರನ್ನು ಬಂಧಿಸಿ ಏಳು ಲಕ್ಷ ರೂ. ಮೌಲ್ಯದ ಎಮ್ಮೆಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ನಗರದಲ್ಲಿ ನಡೆಯುತ್ತಿದ್ದ ದನಗಳ್ಳತನ ಪತ್ತೆಗಾಗಿ ಡಿಎಸ್ಪಿ ಲಕ್ಷ್ಮೀನಾರಾಯಣ ಮಾರ್ಗದರ್ಶನದಲ್ಲಿ ಗೋಲಗುಮ್ಮಟ ವೃತ್ತದ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ರಚಿಸಿದ್ದ ಪೊಲೀಸರ ತಂಡ ಆರೋಪಿತರನ್ನು ಬಂಧಿಸಿದೆ.

ಬಂಧಿತ ಆರೋಪಿತರನ್ನು ಬೇಗಂ ತಲಾಬ್‌ ದೊಡ್ಡಿ ನಿವಾಸಿಗಳಾದ ಶ್ರೀಕಾಂತ ಲಕ್ಷ್ಮಣ ಅಂಕುಶ, ಮೈಲಾರಿ ಲಕ್ಷ್ಮಣ ಅಂಕುಶ, ರಾಮು ತಾಯಪ್ಪ ಗೋಪಣೆ, ಭೀಮು ಅಂಬಾಜಿ ಗೋಪಣೆ, ಭೀಮಶಿ ಶಂಕರ ಗೋಪಣೆ, ಮಾರುತಿ ಅಣ್ಣಪ್ಪ ಗೋಪಣೆ ಎಂದು ಗುರುತಿಸಲಾಗಿದೆ.

ಬಂಧಿತರಿಂದ 7 ಲಕ್ಷ ಮೌಲ್ಯದ 11 ಎಮ್ಮೆಗಳು-ಕಾರುಗಳನ್ನು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಆನಂದಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next