Advertisement

ಗೋವು ತಾಯ್ತನದ ಸಂಕೇತ; ಪವಿತ್ರ ರಾಷ್ಟ್ರೀಯ ಸಂಪತ್ತು

10:44 AM Jun 11, 2017 | Team Udayavani |

ಅಮರಾವತಿ: “ಗೋವು ಎನ್ನುವುದು ತಾಯ್ತನದ ಸಂಕೇತ. ಅದು ಪವಿತ್ರ ರಾಷ್ಟ್ರೀಯ ಸಂಪತ್ತು. ಅದನ್ನು ಕೊಲ್ಲುವುದು ಅಥವಾ ನೋವುಂಟು ಮಾಡುವುದನ್ನು ಜಾಮೀನುರಹಿತ ಅಪರಾಧ ಎಂದು ಘೋಷಿಸಬೇಕು.’

Advertisement

ಹೀಗೆಂದು ಹೇಳಿರುವುದು ಹೈದರಾಬಾದ್‌ ಹೈಕೋರ್ಟ್‌ ನ್ಯಾಯಾಧೀಶ ಬಿ. ಶಿವಶಂಕರ ರಾವ್‌. ಗೋಹತ್ಯೆ ಮಾಡು ವವರಿಗೆ ಜೀವಾವಧಿ ಶಿಕ್ಷೆ ನೀಡುವಂತೆ ರಾಜಸ್ಥಾನ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೂಬ್ಬರು ನ್ಯಾಯಾಧೀಶರಿಂದ ಇಂಥ ಮಾತುಗಳು ಹೊರಬಿದ್ದಿವೆ. ತನ್ನ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದ 63 ಹಸು ಗಳು, 2 ಕೋಣಗಳನ್ನು ವಾಪಸ್‌ ಕೊಡಿಸಬೇಕೆಂದು ಕೋರಿ ಜಾನುವಾರು ವ್ಯಾಪಾರಿಯೊಬ್ಬರು ಸಲ್ಲಿಸಿದ್ದ ಮನವಿ ತಿರಸ್ಕರಿಸುವ ವೇಳೆ ನ್ಯಾ| ರಾವ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

“ಮೊಘಲ್‌ ದೊರೆಗಳೂ ಗೋಹತ್ಯೆಯನ್ನು ನಿರ್ಬಂಧಿಸಿದ್ದರು. ಜಾನುವಾರು ಕ್ರೌರ್ಯ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ತರಬೇಕು. ಆರೋಗ್ಯವಂತ ಜಾನುವಾರುಗಳನ್ನು ವಯಸ್ಸಾಗಿದೆ, ವಧೆಗೆ ಅರ್ಹವಾಗಿವೆ ಎಂದು ಸುಳ್ಳು ಪ್ರಮಾಣಪತ್ರ ನೀಡುವ ಪಶುವೈದ್ಯರಿಗೂ ಶಿಕ್ಷೆಯಾಗಬೇಕು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next