Advertisement

ಹಿರೇಬಂಡಾಡಿ ಕಾರ್ಮಿಕನಿಗೆ ಕೋವಿಡ್-19 ಸೋಂಕು ದೃಢ

05:16 PM Jun 16, 2020 | keerthan |

ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಹಿರೇಬಂಡಾಡಿ ಕಾರ್ಮಿಕನೋರ್ವರಿಗೆ ಕೋವಿಡ್-19 ಪಾಸಿಟಿವ್ ಸೋಂಕು ಕಂಡು ಬಂದಿದೆ.

Advertisement

ಇಲ್ಲಿನ ಕೊಳ್ಳೆಜಾಲು 25 ವರ್ಷದ ಯುವಕ ಕಳೆದ ಐದು ದಿನಗಳ ಹಿಂದೆ ತೀವ್ರ ಜ್ವರದಿಂದ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಈತನಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿದೆ ಎಂದು ತಿಳಿದು ಬಂದಿದೆ.

ಅದರಂತೆ ಕೊಯಿಲ ಸರಕಾರಿ ಆಸ್ಪತ್ರೆಯ ವೈದ್ಯರು , ಕಂದಾಯ ನಿರೀಕ್ಷಕರಾದ ವಿಜಯ ವಿಕ್ರಮ , ಗ್ರಾಮ ಕರಣಿಕರಾದ ರಮಾನಂದ ಚಕ್ಕಡಿ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಮ್ಮಬ್ಬ ಶೌಕತಾಲಿ ಹಾಗೂ ಪೋಲೀಸರು ವ್ಯಕ್ತಿಯ ಮನೆಗೆ ತೆರಳಿ ಇತರ ಸದಸ್ಯರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next