Advertisement

ಹಾಲುಣಿಸುವ ತಾಯಂದಿರಿಗೆ ವ್ಯಾಕ್ಸಿನೇಶನ್‍ನಲ್ಲಿ ಆದ್ಯತೆ ನೀಡಿ;ತಜ್ಞರ ಸಮಿತಿ ಶಿಫಾರಸ್ಸು

09:10 AM May 23, 2021 | Team Udayavani |

ಪಣಜಿ: ಕೋವಿಡ್-19 ಮೂರನೇಯ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹಾಲುಣಿಸುವ ತಾಯಂದಿರನ್ನು ವ್ಯಾಕ್ಸಿನೇಶನ್ ಮಾಡಲು ಆದ್ಯತೆಯ ಗುಂಪಾಗಿ ಪರಿಗಣಿಸಬೇಕೆಂದು ಗೋವಾ ಸರ್ಕಾರ ರಚಿಸಿದ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.

Advertisement

ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ನೇತೃತ್ವದ ಸಮೀತಿ ಮೂರನೇಯ ಅಲೆಯಲ್ಲಿ ಮಕ್ಕಳಿಗೆ ಚಿಕಿತ್ಸೆಯ ಪ್ರೊಟೊಕಾಲ್‍ನ್ನು ಸೂಚಿಸಲು ಶನಿವಾರ ಸಭೆ ನಡೆಸಲಾಯಿತು. ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಡಾ. ಬಾಂದೇಕರ್- ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಗುವಿನೊಂದಿಗೆ ಹಾಲುಣಿಸುವ ತಾಯಂದಿರಿಗೆ ವ್ಯಾಕ್ಸಿನೇಶನ್‍ನಲ್ಲಿ ಆದ್ಯತೆ ನೀಡಬೇಕು. ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ 2.5 ಲಕ್ಷ ಮಕ್ಕಳು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 4 ಲಕ್ಷ ಮಕ್ಕಳಿದ್ದಾರೆ ಎಂದು ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದರು.

ತಜ್ಞರ ಸಮೀತಿಯು ಮೂರನೇಯ ಅಲೆಯ ಸಂದರ್ಭದಲ್ಲಿ ಮಕ್ಕಳಿಗೆ ನೀಡಬೇಕಾದ ಚಿಕಿತ್ಸೆಯ ಪ್ರೊಟೊಕಾಲ್ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು ಎಂದು ಡಾ. ಬಾಂದೇಕರ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗೋವಾ ವೈದ್ಯಕೀಯ ಕಾಲೇಜಿನ ಹಿರೀಯ ವೈದ್ಯ ಡಾ. ಜಗದೀಶ್ ಕಾಕೋಡಕರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next