Advertisement

ಕೋವಿಡ್ ರಣಕೇಕೆ…ಉತ್ತರಪ್ರದೇಶದಿಂದ ಗಂಗಾನದಿ ತೀರದತ್ತ ತೇಲಿಬಂದ 40ಕ್ಕೂ ಅಧಿಕ ಶವಗಳು!

05:59 PM May 10, 2021 | Team Udayavani |

ಪಾಟ್ನಾ:ಭಾರತದಲ್ಲಿನ ಕೋವಿಡ್ ಎರಡನೇ ಅಲೆಯ ಭೀಕರತೆ ಸೋಮವಾರ(ಮೇ 10) ಇನ್ನಷ್ಟು ಬಯಲಾಗಿದೆ. ಅದಕ್ಕೆ ಕಾರಣವಾಗಿದ್ದು ಬಿಹಾರದ ಬಕ್ಸಾರ್ ನಲ್ಲಿ ಗಂಗಾನದಿ ತೀರದಲ್ಲಿ ಕೊಳೆತು ನಾರುತ್ತಿರುವ ಡಜನ್ ಗಟ್ಟಲೇ ಶವಗಳು ಪತ್ತೆಯಾಗಿರುವುದು!

Advertisement

ಇದನ್ನೂ ಓದಿ:ಮನೆಯಿಂದ ಹೊರಗೆ ಬರದಂತೆ ಪೋಲಿಸ್ ಅಧಿಕಾರಿಗಳಿಂದ ಕೈಮುಗಿದು ಮನವಿ

ಉತ್ತರಪ್ರದೇಶದ ಗಡಿಭಾಗದ ಬಿಹಾರದ ಚೌಸಾ ಪಟ್ಟಣದಲ್ಲಿರುವ ಗಂಗಾನದಿ ತೀರದಲ್ಲಿ ಕೊಳೆತು ನಾರುತ್ತಿರುವ ಹಲವಾರು ಶವಗಳು ತೇಲುತ್ತಿರುವುದು ವಿಡಿಯೋ ಮತ್ತು ಫೋಟೋಗಳಲ್ಲಿ ಸೆರೆಯಾಗಿದೆ.

ಇಂದು ಬೆಳಗ್ಗೆ ಜನರು ಈ ಗಂಗಾನದಿ ತೀರದತ್ತ ಹೆಜ್ಜೆ ಹಾಕಿದ ಸಂದರ್ಭದಲ್ಲಿ ಸುಮಾರು 40ಕ್ಕೂ ಅಧಿಕ ಶವಗಳು ತೇಲುತ್ತಾ ಬರುತ್ತಿರುವ ದೃಶ್ಯ ಕಂಡುಬಂದಿತ್ತು. ಈ ಶವಗಳು ಉತ್ತರಪ್ರದೇಶದಿಂದ ತೇಲುತ್ತಾ ಬಂದಿರುವುದಾಗಿ ಸ್ಥಳೀಯ ಅಧಿಕಾರಿಗಳು ಶಂಕಿಸಿದ್ದಾರೆ.

ಅಲ್ಲದೇ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದ ರೋಗಿಗಳ ಶವ ಸಂಸ್ಕಾರ ನಡೆಸಲು ಶವಾಗಾರ ಅಥವಾ ಹೂಳಲು ಸ್ಥಳ ಸಿಗದ ಪರಿಣಾಮ ಈ ಕೃತ್ಯ ಎಸಗಲು ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಂದಾಜು 40ರಿಂದ 45 ಶವಗಳು ತೇಲುತ್ತಿರುವುದು ಕಂಡುಬಂದಿತ್ತು ಎಂದು ಚೌಸಾ ಜಿಲ್ಲೆಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದು, ಇದರಿಂದ ಮಹಾದೇವ ಘಾಟ್ ಪ್ರದೇಶ ತೀವ್ರ ಭಯಾನಕ ಹುಟ್ಟಿಸುವಂತಿತ್ತು. ಈ ಶವಗಳನ್ನು ನದಿಗೆ ಎಸೆದಂತೆ ಕಾಣಿಸುತ್ತಿದೆ. ಕೆಲವರು ಅಂದಾಜು ನೂರು ಶವಗಳು ಇದ್ದಿರುವುದಾಗಿ ಹೇಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next