Advertisement

ಕೋವಿಡ್ ತಡೆಗೆ ಸೇವಾ ಸಂಸ್ಥೆಗಳ ಸಿಬಂದಿ ಶ್ರಮ

06:14 PM Jun 10, 2021 | Team Udayavani |

ರಾಮನಗರ: ಕೋವಿಡ್ ಸೋಂಕು ನಿಯಂತ್ರಣ ಮತ್ತು ಚಿಕಿತ್ಸಾ ವಿಚಾರದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಿಬ್ಬಂದಿಗಳೂ ಸಹ ಶ್ರಮಿಸುತ್ತಿದ್ದು, ಅವರನ್ನು ಸಹ ಕೋವಿಡ್ ವಾರಿಯರ್ ಎಂದು ಘೋಷಿಸುವಂತೆ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂಸೇವಾ ಸಂಸ್ಥೆಗಳ (ಫೆವಾರ್ಡ್ ಕರ್ನಾಟಕ) ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು, ಮುಖ್ಯಮಂತ್ರಿಗಳಿಗೆ ಮಾಡಿಕೊಂಡಿರುವ ಮನವಿಯನ್ನು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಸಲ್ಲಿಸಿದರು. ಕೋವಿಡ್ ವಾರಿಯರ್ ಎಂದು ಘೋಷಿಸಿ ಅವರಿಗೂ ಆದ್ಯತೆ ಮೇರೆಗೆ ಕೋವಿಡ್ ವ್ಯಾಕ್ಸಿನ್ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

Advertisement

ಸೌಲಭ್ಯಗಳನ್ನು ಕಲ್ಪಿಸಿ: ಕೋವಿಡ್ 2ನೇ ಅಲೆ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಸಿಬ್ಬಂದಿಗೆ ಆರೋಗ್ಯ ಭದ್ರತೆ, ಉಚಿತ ಚಿಕಿತ್ಸೆ ಮತ್ತು ಜೀವ ವಿಮೆ ಒದಗಿಸ ಬೇಕು. ಮೂರು ತಿಂಗಳಿಗಾಗುವಂತೆ ದಿನಸಿ ಪದಾ ರ್ಥಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಆಡಳಿತ ಸಂಸ್ಥೆ ಗಳು ರೂಪಿಸುವ ಯೋಜನೆಗಳಲ್ಲಿ ಮತ್ತು ಟಾಸ್ಕ್ ಫೋರ್ಸ್ನಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ನಡೆಸುವಂತೆ ಆದೇಶ ಹೊರಡಿಸಬೇಕು. ಕೋವಿಡ್ನಿಂದ ಸಾವು ಸಂಭವಿಸಿ ತಮ್ಮವರನ್ನು ಕಳೆ ದುಕೊಂಡು ನೋವಿನಲ್ಲಿರುವ ಕುಟುಂಬಗಲಿಗೆ ತಲಾ 5 ಲಕ್ಷ ಆರ್ಥಿಕ ನೆರವು ಘೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next