Advertisement

ಕೊರೊನಾ ನಿರ್ಮೂಲನೆಗೆ ಹೋಮ

08:04 PM Jun 05, 2021 | Team Udayavani |

ಮದ್ದೂರು: ತಾಲೂಕಿನ ವಳಗೆರೆಹಳ್ಳಿಯ ಶ್ರೀಸಾಯಿ ಮಂದಿರದಲ್ಲಿಕೊರೊನಾ ನಿರ್ಮೂಲನೆ ಸಂಬಂಧ ಹೋಮ, ಹವನ ಹಾಗೂ ವಿಶೇಷಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Advertisement

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿ ದೇಶದಾದ್ಯಂತಸಾವು ನೋವು ಹೆಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಲೋಕಕಲ್ಯಾಣಕ್ಕಾಗಿ ಪೂಜೆ ಸಲ್ಲಿಸುವ ಮೂಲಕ ಕೊರೊನಾ ದೂರವಾಗಲೆಂದುಪ್ರಾರ್ಥಿಸಲಾಯಿತು. ಶ್ರೀಸಾಯಿಮಂದಿರದ 48 ದಿವಸಗಳ ಮಂಡಲಪೂಜಾ ಕಾರ್ಯಕ್ರಮದಂದು ಅಗ್ನಿಹೋಮ ಕೈಗೊಂಡು ವಿಶೇಷ ಪೂಜೆನಡೆಸುವ ಮೂಲಕ ದೇಶ ಸುಭೀಕ್ಷವಾಗಲೆಂದು ಕೋರಲಾಯಿತು.

ಈ ವೇಳೆ ಮಾತನಾಡಿದ ಮಂಡ್ಯ ಸಾಯಿಬಾಬ ಧರ್ಮದರ್ಶಿಸಾಯಿ ಭಾಸ್ಕರ ಗುರೂಜಿ, ಸೋಂಕು ತೊಲಗಿ, ಯಾವುದೇ ಸಾವುನೋವು ಸಂಭವಿಸಬಾರದೆಂಬ ದೃಷ್ಟಿಯಿಂದ ಧಾರ್ಮಿಕ, ವೈಜ್ಞಾನಿಕವಾಗಿ ಪೂಜೆ ಸಲ್ಲಿಸುತ್ತಿರುವುದಾಗಿ ಹೇಳಿದರು. ಗ್ರಾಪಂ ಅಧ್ಯಕ್ಷೆ ಶಶಿಕಲಾಉಮಾಶಂಕರ್‌, ಸದಸ್ಯ ಎಸ್‌.ದಯಾನಂದ್‌, ಮುಖಂಡರಾದವಿ.ಸಿ.ಉಮಾಶಂಕರ್‌, ಪರಮೇಶ್‌, ಸೀನಪ್ಪ, ಶಂಕರಯ್ಯ, ಸತೀಶ್‌,ಅರುಣ, ರಾಜಮ್ಮ, ಭಾನು, ಎಂ.ವೀರಪ್ಪ, ಪೃಥ್ವಿರಾಜ್‌, ಅರ್ಚಕಶಂಕರಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next