Advertisement

ಸೋಂಕಿತರಿಂದ ಅಹವಾಲು ಸ್ವೀಕಾರ

06:48 PM May 27, 2021 | Team Udayavani |

ಚಿಕ್ಕಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕುನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ(ಬಾಬು), ನಗರಸಭಾ ಸದಸ್ಯರು, ಪೌರಾಯುಕ್ತ ಡಿ.ಲೋಹಿತ್‌ ಮತ್ತು ಸಿಬ್ಬಂದಿಕೋವಿಡ್‌-19 ಸೊಂಕಿತರ ಮನೆ ಬಾಗಿಲಿಗೆ ತೆರಳಿ ಅವರಕುಂದುಕೊರತೆ ಆಲಿಸಿ ಅಹವಾಲು ಆಲಿಸಿದರು.

Advertisement

ವಾರ್ಡ್‌ಸಂಖ್ಯೆ 5, 8ರಲ್ಲಿ ನಗರಸಭಾ ಸದ ಸ್ಯರಾದ ನಾಗರಾಜ್‌, ಪಾಪುಅವರೊಂದಿಗೆ ಕೋವಿಡ್‌ ಕಾರ್ಯ ಪಡೆ ಸದಸ್ಯರೊಂದಿಗೆನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದ್‌ ರೆಡ್ಡಿ (ಬಾಬು),ಪೌರಾಯುಕ್ತ ಡಿ.ಲೋಹಿತ್‌ ಮತ್ತು ಸಿಬ್ಬಂದಿ ಸಂಚರಿಸಿದರು.

ಮನೆಯಲ್ಲಿ ಸೌಲಭ್ಯ, ಶೌಚಾಲಯ ಇಲ್ಲದಿದ್ದಲ್ಲಿ ಜಿಲ್ಲಾಡಳಿತಕಡ್ಡಾಯವಾಗಿ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರನ್ನು ಸಮೀಪದ ಕೋವಿಡ್‌ ಕೇರ್‌ ಸೆಂಟರ್‌ ಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆಯ ಅಧ್ಯಕ್ಷಡಿ.ಎಸ್‌.ಆನಂದ್‌ರೆಡ್ಡಿ(ಬಾಬು) ಮನವಿ ಮಾಡಿದರು.

ಜಿಲ್ಲೆಯಲ್ಲಿ ಮೇ 27 ರಿಂದ ಜಿಲ್ಲಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದು ನಾಗರಿಕರು ಅನಗತ್ಯವಾಗಿ ಮನೆಯಿಂದಹೊರ ಬರಬಾರದು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next